ಮಂಗಳೂರಿನಲ್ಲಿ ಪರ್ವ ಕಾದಂಬರಿಯ ರಂಗ ಪ್ರಸ್ತುತಿ

ಮಂಗಳೂರು: ರಂಗಾಯಣ, ಮೈಸೂರು ಅರ್ಪಿಸುವ ಡಾ. ಎಸ್. ಎಲ್. ಬೈರಪ್ಪನವರ ಪರ್ವ ಕಾದಂಬರಿಯ ರಂಗ ಪ್ರಸ್ತುತಿ. ಮೇ 10, ಮಂಗಳವಾರದಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ. ನಿರ್ದೇಶನ: ಪ್ರಕಾಶ್ ಬೆಳವಾಡಿ. ಟಿಕೇಟುಗಳಿಗಾಗಿ ಸಂಪರ್ಕಿಸಿ: www.rangayana.org ನವಕರ್ನಾಟಕ ಪುಸ್ತಕ ಮಳಿಗೆ, ಬಲ್ಮಠ, ಜ್ಯೋತಿ ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ದೂರವಾಣಿ: 99024 50686
ರಂಗಭೂಮಿಯ ಸಾಧಕ “ಅನೀಶ್ ಪ್ರಸಾದ್” ಎಂಬ ಬಾಲಕ : ಅಭಿನಯ ಸೊಗಸುಗಾರ, ಇವನೇ ಎಳೆಯ ಕನಸುಗಾರ

ಇದು”ಬಣ್ಣದ ಕನಸುಗಾರರು” ಸರಣಿಯ ನಾಲ್ಕನೆಯ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ರಂಗಭೂಮಿ ಎಂದಾಕ್ಷಣ ಹಲವು ವಿಷಯಗಳು ನೆನಪಾಗಬಹುದು. ಬಣ್ಣ, ಬೆಳಕು, ಮಾತು, ಧ್ವನಿ, ಸಂಗೀತ, ನಟನೆ, ನೃತ್ಯ..ರಂಗಭೂಮಿಯ ಪ್ರತಿಯೊಬ್ಬನಿಗೂ ಈ ಎಲ್ಲಾ ವಿಷಯಗಳ ಕನಿಷ್ಠ ಪ್ರಜ್ಞೆ […]
‘ಅಂದಾಜಿ ಆಪುಜಿ’ ನಾಟಕಕ್ಕೆ ಮುಹೂರ್ತ, ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದ ಬದಲಾವಣೆ ಸಾಧ್ಯ: ಶಶಿಧರ್ ಶೆಟ್ಟಿ

ಕಾರ್ಕಳ: ನಾಟಕಗಳು ಕಲಾಭಿಮಾನಿಗಳನ್ನು ರಂಜಿಸುವುದರ ಜತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿ ಆ ಮೂಲಕ ಸಮಾಜದ ಬದಲಾವಣೆಯಲ್ಲಿ ಶ್ರಮಿಸಬೇಕಾಗಿದೆ. ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಹೇಳಿದರು. ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನದಲ್ಲಿ ಶುಕ್ರವಾರ ನಡೆದ ತುಳುವ ಸಿರಿ ಕಲಾವಿದರು ಬೆಳ್ಮಣ್ ಇವರ ಅಭಿನಯದ ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ ರಚಿಸಿದ ಈ ವರ್ಷದ ವಿನೂತನ ನಾಟಕ ‘ಅಂದಾಜಿ ಆಪುಜಿ’ ಇದರ ಶುಭ ಮುಹೂರ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. […]