ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ ನಿಧನ

ಉಡುಪಿ: ಅಂಬಲಪಾಡಿ ಬಲ್ಲಾಳ ಮನೆತನದ ಹಿರಿಯ ಹಾಗೂ ಪ್ರಸಿದ್ಧ ಜ್ಯೋತಿಷಿ ರಾಜಗೋಪಾಲ ಬಲ್ಲಾಳ (74) ಅವರು ಹೃದಯಾಘಾತದಿಂದ ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ . ಉಡುಪಿಯ ಭಂಡಾರಕೇರಿ ಮಠದ ಆವರಣದಲ್ಲಿ ಶ್ರೀ ಮಾರುತಿ ಜ್ಯೋತಿಷ್ಯಾಲಯವನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಅವರು ಪಂಚಾಂಗ ಕರ್ತೃಗಳಲ್ಲಿ ಒಬ್ಬರಾಗಿದ್ದರು. ಅಸಂಖ್ಯ ಜನರಿಗೆ ಜ್ಯೋತಿಷ್ಯಪ್ರಶ್ನೆಯ ಮೂಲಕ ಸಾಂತ್ವನ ನೀಡುತ್ತಿದ್ದರು. ಬಲ್ಲಾಳರ ನಿಧನಕ್ಕೆ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, […]