ಬಿಜೆಪಿ ಸಂಘಟನಾ ಪ್ರ.ಕಾರ್ಯದರ್ಶಿಯಾಗಿ ಬಿ.ಎಲ್.‌ ಸಂತೋಷ್ ನೇಮಕ

ಬೆಂಗಳೂರು: ಭಾರತೀಯ ‌ಜನತಾ‌ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಬಳಿಕ ಎರಡನೇ ಉನ್ನತ ಸ್ಥಾನವೆಂದು ಗುರುತಿಸಲ್ಪಟ್ಟಿರುವ ರಾಷ್ಟ್ರೀಯ ಸಂಘಟನಾ‌ ಪ್ರಧಾನ‌‌ ಕಾರ್ಯದರ್ಶಿ ಯಾಗಿ ಉಡುಪಿ‌ ಜಿಲ್ಲೆಯ ‌ಬಿ.ಎಲ್. ಸಂತೋಷ್ ಅವರು‌ ನೇಮಕವಾಗಿದ್ದಾರೆ. ಸಂತೋಷ್ ಅವರು ಈ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗರಾಗಿದ್ದಾರೆ. ರಾಷ್ಟ್ರೀಯ ಸಂಘಟನಾ ಜಂಟೀ ಪ್ರಧಾನ‌ ಕಾರ್ಯರ್ಶಿಯಾಗಿದ್ದ ಸಂತೋಷ್ ಅವರನ್ನು ಸಂಘಟನ ಪ್ರಧಾನ ಕಾರ್ಯದರ್ಶಿ ಯನ್ನಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆದೇಶ ಹೊರಡಿಸಿದ್ದಾರೆ. ಉಡುಪಿಯ ಹಿರಿಯಡ್ಕ ದವರಾದ ಸಂತೋಷ್, ಆರ್ ಎಸ್ ಎಸ್ […]