ಬಿಜೆಪಿ ಸಂಘಟನಾ ಪ್ರ.ಕಾರ್ಯದರ್ಶಿಯಾಗಿ ಬಿ.ಎಲ್.‌ ಸಂತೋಷ್ ನೇಮಕ

ಬೆಂಗಳೂರು: ಭಾರತೀಯ ‌ಜನತಾ‌ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಬಳಿಕ ಎರಡನೇ ಉನ್ನತ ಸ್ಥಾನವೆಂದು ಗುರುತಿಸಲ್ಪಟ್ಟಿರುವ ರಾಷ್ಟ್ರೀಯ ಸಂಘಟನಾ‌ ಪ್ರಧಾನ‌‌ ಕಾರ್ಯದರ್ಶಿ ಯಾಗಿ ಉಡುಪಿ‌ ಜಿಲ್ಲೆಯ ‌ಬಿ.ಎಲ್. ಸಂತೋಷ್ ಅವರು‌ ನೇಮಕವಾಗಿದ್ದಾರೆ.
ಸಂತೋಷ್ ಅವರು ಈ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗರಾಗಿದ್ದಾರೆ. ರಾಷ್ಟ್ರೀಯ ಸಂಘಟನಾ ಜಂಟೀ ಪ್ರಧಾನ‌ ಕಾರ್ಯರ್ಶಿಯಾಗಿದ್ದ ಸಂತೋಷ್ ಅವರನ್ನು ಸಂಘಟನ ಪ್ರಧಾನ ಕಾರ್ಯದರ್ಶಿ ಯನ್ನಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆದೇಶ ಹೊರಡಿಸಿದ್ದಾರೆ.
ಉಡುಪಿಯ ಹಿರಿಯಡ್ಕ ದವರಾದ ಸಂತೋಷ್, ಆರ್ ಎಸ್ ಎಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಸಮರ್ಥ ವಾಗಿ‌ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೇ ಅವರು ಓರ್ವ ಸಂಘಟನಾ ಚತುರರಾಗಿ ಗುರುತಿಸಿಕೊಂಡಿದ್ದಾರೆ.