ಸ್ವಬಂಧನದಿಂದ ಬಿಡುಗಡೆಯಾಗದಿದ್ದರೆ ಹೆಣ್ಣು ಮಹಾ ಇಳೆಯಾಗಲು ಸಾಧ್ಯವಿಲ್ಲ: ಆಶಾದೇವಿ 

ಉಡುಪಿ: ಮಹಿಳೆಯರು ಎಲ್ಲಿಯವರೆಗೆ ತಮಗೆ ತಾವೇ ಹಾಕಿಕೊಂಡಿರುವ ಕೆಲವೊಂದು ಸ್ವಬಂಧನದಿಂದ ಬಿಡುಗಡೆ ಹೊಂದುದಿಲ್ಲವೋ ಅಲ್ಲಿಯವರೆಗೆ ಅವರು ಮಹಾ ಇಳೆಯಾಗಲು ಸಾಧ್ಯವಿಲ್ಲ ಎಂದು ವಿಮರ್ಶಕಿ, ಸ್ತ್ರೀವಾದಿ ಚಿಂತಕಿ ಡಾ. ಎಂ.ಎಸ್‌. ಆಶಾದೇವಿ ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್‌ ಘಟಕ 1 ಮತ್ತು 2ರ ವತಿಯಿಂದ ವಿಶ್ವಮಹಿಳಾ ದಿನಾಚರಣೆ ಪ್ರಯುಕ್ತ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮಹಾ ಇಳೆ—ಮಹಿಳೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ನಮ್ಮ ಘನತೆಯನ್ನು ಕಳೆದುಕೊಳ್ಳದೆ ಬಹಳ ಮೌನವಾಗಿ ಸ್ತ್ರೀವಾದ ಅತ್ಯಂತ […]