ಆಗುಂಬೆ ಘಾಟಿಯಲ್ಲಿ ಒಂದು ತಿಂಗಳು ವಾಹನ ಸಂಚಾರ ಬಂದ್ !:ಮಾ.1 ರಿಂದ ತುರ್ತು ಕಾಮಗಾರಿ
ಉಡುಪಿ: ತುರ್ತು ಕಾಮಗಾರಿ ಪ್ರಯುಕ್ತ ಆಗುಂಬೆ ಘಾಟಿ ವಾಹನ ಸಂಚಾರ ಮಾ.1 ರಿಂದ ಮಾ-31 ರವರೆಗೆ ಒಂದು ತಿಂಗಳ ಕಾಲ ಸ್ಥಗಿತಗೊಳ್ಳಲಿದ್ದು ಆಗುಂಬೆ ಮೂಲಕ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮೊದಲಾದ ಕಡೆಗೆ ಸಾಗುವವರಿಗೆ ರಸ್ತೆ ಬಂದ್ ಬಿಸಿ ತಟ್ಟಲಿದೆ. ತುರ್ತು ಕಾಮಗಾರಿ: ಆಗುಂಬೆ ಘಾಟಿಯಲ್ಲಿ ಮಣ್ಣು ಕುಸಿತ, ಬಂಡೆಗಳ ಕುಸಿತ ಆಗಾಗ ನಡೆಯುತ್ತಲೇ ಇರುವ ಕಾರಣ ಆಗುಂಬೆಯ ಕೆಲವೊಂದು ತಿರುವುಗಳಲ್ಲಿ ವಾಹನ ಸಂಚಾರ ಮಾಡುವುದು ಅಪಾಯಕಾರಿಯಾಗಿದೆ. ಆ ಸಲುವಾಗಿ 14ನೇ ತಿರುವಿನಿಂದ 7ನೇ ತಿರುವಿನವರೆಗೆ ಹಾಗೂ 7ನೇ […]