◊ ಶ್ರದ್ಧಾ ಪೂಜಾರಿ
ಕಾರ್ಕಳ :ಕಳೆದ 2-3ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ.ಸ್ವರ್ಣೆಯ ಹರಿವು ಭಯಂಕರವಾಗಿದ್ದು ಭಯ ಹುಟ್ಟಿಸುವಂತಿದೆ. ತೆಳ್ಳಾರು ಮತ್ತು ಮುಂಡ್ಲಿಯನ್ನು ಸಂಪರ್ಕಿಸುವ ನದಿಯು ಉಕ್ಕಿ ಹರಿಯುವ ಮೂಲಕ ಸ್ವರ್ಣ ನದಿ ಜಲಾಶಯದ ರುದ್ರರೂಪ ಭಯ ಹುಟ್ಟಿಸುವಂತಿದೆ. ಹೊಲ ಗದ್ದೆಗಳು, ತೋಟ, ಮನೆಗಳಲ್ಲಿ ನೀರು ತುಂಬಿದ್ದು ಒಂದೆಡೆ ಪ್ರಕೃತಿಯ ಈ ರುದ್ರ ರಮಣೀಯ ನೋಟ ಸೊಗಸಾಗಿ ಕಂಡರೂ ಸದ್ಯ ಪ್ರವಾಹದ ಭೀತಿಯೇ ಎಲ್ಲರ ಕಣ್ಣೆದುರಿಗಿದೆ.