ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಚೌಕಿ ಭೋಜನ ಶಾಲೆಯ ಹತ್ತಿರ ಕುಡಿಯುವ ಶುದ್ಧ ನೀರಿನ ಘಟಕ ಹಾಗೂ ಕೈ ತೊಳೆಯಲು ನೀರಿನ ಕೊಳವೆ ಮತ್ತು ಸ್ಟೀಲಿನ ಬೆಸನನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು.
ಈ ಕಾಮಗಾರಿಯ ಪ್ರಾಯೋಜಕರಾದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ನಾಗರಾಜ ರಾವ್,ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ರವೀಂದ್ರ ರೈ.ಎಂ, ಬೆಂಗಳೂರಿನ ಉದ್ಯಮಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದು ಶ್ರೀಪಾದರು ಅವರಿಗೆ ಶಾಲು ಹೊದಿಸಿ ಅನುಗ್ರಹಿಸಿದರು.ಶ್ರೀಪಾದರ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ,ಪರ್ಯಾಯ ಮಠದ ಪ್ರಬಂಧಕರಾದ ಪ್ರಹಲ್ಲಾದ ರಾವ್,ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.


















