ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ: 1.85 ಕೋಟಿ ಲಾಭ; ಶೇ. 12 ಡಿವಿಡೆಂಡ್ ಘೋಷಣೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ 21 ನೇ ವಾರ್ಷಿಕ ಮಹಾಸಭೆಯು ಆಗಸ್ಟ್ 21 ರವಿವಾರ, ಶ್ರೀ ನರಸಿಂಹ ಸಭಾಭವನ ನರಸಿಂಗೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.

2021-22 ರ ಸಾಲಿನ ಅಂತ್ಯಕ್ಕೆ ಸಂಸ್ಥೆಯು ಪಾಲು ಬಂಡವಾಳ ರೂ 1.50 ಕೋಟಿ, ನಿಧಿಗಳು ರೂ.8.24 ಕೋಟಿ, ಠೇವಣಿ ರೂ 85.78 ಕೋಟಿ, ಸಾಲಗಳು ರೂ 66.93 ಕೋಟಿ, ಒಟ್ಟು 318 ಕೋಟಿ ವ್ಯವಹಾರ ನಡೆಸಿ, ರೂ.1.85 ಕೋಟಿ ನಿವ್ವಳ ಲಾಭ ಗಳಿಸಿ ಶೇ 12% ಲಾಭಾಂಶ ವಿತರಿಸಿದೆ.

ಸರಳೇಬೆಟ್ಟು ರಮಾನಾಥ ನಾಯಕ್ ಸಂಸ್ಥೆಯಿಂದ ನಡೆಸಲಾಗುವ ದುರ್ಗಾಶ್ರೀ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿ ಉಳಿತಾಯ ಹಾಗೂ ಸಾಲ ಪಡೆಯಲು ಸ್ವಸಹಾಯ ಗುಂಪುಗಳನ್ನು ರಚಿಸಿರುವುದನ್ನು ಶ್ಲಾಘಿಸಿ ಯೋಜನೆ ಯಶಸ್ವಿಯಾಗಲೆಂದು ಶುಭಹಾರೈಸಿದರು.

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಕಿರಿಯ ಪ್ರಾಯದಲ್ಲಿ ಐ.ಬಿ.ಬಿ.ಐ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಸ್ಥೆಯ ಆಸ್ತಿ ಮೌಲ್ಯ ಮಾಪಕ ಅವಿನಾಶ್ ನಾಯಕ್ ಹಿರಿಯಡ್ಕ ಇವರನ್ನು ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ ಶೇ. 90 ಅಥವಾ ಅಧಿಕ ಅಂಕಗಳಿಸಿದ ಮತ್ತು ಪಿ.ಯು.ಸಿ ಯಲ್ಲಿ ಶೇ. 80 ಅಥವಾ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಅಶೋಕ್ ಕಾಮತ್ ಮಾತನಾಡಿ,ಸಂಸ್ಥೆಯಲ್ಲಿ ಬಡ್ದಿರಹಿತ ಸೋಲಾರ್ ಸಾಲದ ವ್ಯವಸ್ಥೆ ಇದ್ದು, ಸಾಲಗಳಿಗೆ ಸೇವಾ ಶುಲ್ಕವಿರುವುದಿಲ್ಲ. ಇಲ್ಲಿ ಇ-ಸ್ಟಾಂಪಿಂಗ್, ಲಾಕರ್ ವ್ಯವಸ್ಥೆ ಮತ್ತು ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. 2022-23 ರಲ್ಲಿ ಸಂಸ್ಥೆಯ ಠೇವಣಿ 100 ಕೋಟಿಗೂ ದಾಟಿಸುವ ಯೋಜನೆ ಇದೆ ಎಂದ ಅವರು, ಪರ್ಕಳದಲ್ಲಿ ಖರೀದಿಸಿದ ಜಾಗದಲ್ಲಿ ಕಟ್ಟದ ನಿರ್ಮಾಣದ ರೂಪುರೇಷೆ ನೀಡಿ ನಿಯೋಜಿತ ಕಟ್ಟಡದ ಚಿತ್ರ ಬಿಡುಗಡೆ ಮಾಡಿದರು. ಸಂಸ್ಥೆಯ ಅಭಿವೃದ್ದಿಗೆ ಸಹಕರಿಸಿದ ನಿರ್ದೇಶಕರಿಗೆ, ಸದಸ್ಯರಿಗೆ ಶಾಖಾ ಸಲಹಾ ಸಮಿತಿ ಸದಸ್ಯರಿಗೆ,ಠೇವಣಿ ಸಂಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು.

ಸಂಸ್ಥೆಯ ನಿರ್ದೇಶಕರುಗಳಾದ ರಾಮಕೃಷ್ಣ ನಾಯಕ್ ಬಿ. ಪರ್ಕಳ, ನರಸಿಂಹ ನಾಯಕ್ ಮಣಿಪಾಲ, ಮಹೇಶ್ ನಾಯಕ್ ಅಂಬಲಬೆಟ್ಟು, ರವೀಂದ್ರ ಪಾಟ್ಕರ್ ಬಂಟಕಲ್ಲು, ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಗಣಪತಿ ಪ್ರಭು ಕುಕ್ಕೆಹಳ್ಳಿ, ಶ್ರೀಮತಿ ರೂಪ ನಾಯಕ್ ಪರ್ಕಳ ಉಪಸ್ಥಿತರಿದ್ದರು.

ಮಹಾಸಭೆಯ ನಂತರ ಭಕ್ತಿ ಸಿಂಚನ ಕಾರ್ಯಕ್ರಮ ಜರುಗಿತು. ಖ್ಯಾತ ಗಾಯಕ ಅನಂತ್ ರಾಜ್ ಮಿಸ್ತ್ರಿ ಗುಲ್ಬರ್ಗಾ ಮತ್ತು ಶ್ರೀಮತಿ ದಿವ್ಯಾ ಗಿರಿಧರ್ ಬೆಂಗಳೂರು ನೆರೆದಿದ್ದವರನ್ನು ಭಕ್ತಿ ಲೋಕಕ್ಕೆ ಕೊಂಡೊಯ್ದರು.

ಮುಖ್ಯ ಕಾರ್ಯನಿರ್ವಣಾಧಿಕಾರಿ ನಿತ್ಯಾನಂದ ನರಸಿಂಗೆ ವರದಿ ಲೆಕ್ಕಪತ್ರ ಮಂಡಿಸಿದರು. ಬಿ ರಾಮಕೃಷ್ಣ ನಾಯಕ್ ವಾರ್ಷಿಕ ಮಹಾಸಭೆಯ ನೋಟೀಸು ಓದಿದರು. ಉಪಾಧ್ಯಕ್ಷ ಪಾಂಡುರಂಗ ಕಾಮತ್ ಸ್ವಾಗತಿಸಿದರು. ಸುಧಾಕರ್ ನಾಯಕ್ ನಿರೂಪಿಸಿದರು. ನಿರ್ದೇಶಕ ವಿಜೇತ್ ಕುಮಾರ್ ವಂದಿಸಿದರು.