ಸಿದ್ದಾಪುರ ವಲಯ ಕೋಟಿ-ಚೆನ್ನಯ ಕ್ರೀಡಾ ಕೂಟ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿನೆ

ಸಿದ್ದಾಪುರ: ಸಿದ್ದಾಪುರ ವಲಯ ಕೋಟಿ-ಚೆನ್ನಯ ಕ್ರೀಡಾ ಕೂಟ ವಾಲಿಬಾಲ್ ಪಂದ್ಯಾವಳಿಯನ್ನು ಇಂದು ಸಂಜೆ ಸಿದ್ದಾಪುರದಲ್ಲಿ ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ ಅವರು ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ರಾಜು ಪೂಜಾರಿ,  ಕುಂದಾಪುರ ತಾಲ್ಲೂಕು ಪಂಚಾಯಿತ್ ಸದಸ್ಯರು  ವಾಸುದೇವ ಪೈ ಸಿದ್ದಾಪುರ, ಜಿಲ್ಲಾ  ಪಂಚಾಯಿತ್ ಸದಸ್ಯ  ರೋಹಿತ್ ಕುಮಾರ್  ಶೆಟ್ಟಿ,  ಬಿಲ್ಲವ ಸಂಘದ  ಅಧ್ಯಕ್ಷ ಗಾಂಧಿ ಪೂಜಾರಿ ಐರೈಬೈಲು, ಸಿದ್ದಾಪುರ ಗ್ರಾಮ ಪಂಚಾಯಿತ್  ಉಪಾಧ್ಯಕ್ಷ  ಭಾರತ್ ಕಾಮತ್  ಸಿದ್ದಾಪುರ, ಕೃಷ್ಣ ಪೂಜಾರಿ ಅಮಾಸೈಬೈಲು,  ಶೇಖರ್ ಕೋಟ್ಯಾನ್, ಸತೀಶ್ ಶೆಟ್ಟಿ ಕಡ್ರಿ ಸಿದ್ದಾಪುರ ಹಾಗೂ ಇತರ  ಸದಸ್ಯರು ಉಪಸ್ಥಿತರಿದ್ದರು.