ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಗರ್ಭಗೃಹ ಸಮರ್ಪಣೆ

ಉಡುಪಿ: ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಗರ್ಭಗೃಹ ಸಮರ್ಪಣೆ ಕಾರ್ಯಕ್ರಮ ಭಾನುವಾರ ಅತ್ಯಂತ‌ ವೈಭವದಿಂದ ದೇಗುಲದ ಆವರಣದಲ್ಲಿ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ‌ ಆಶೀರ್ವಚನ ನೀಡಿದ ಮೂಡುಬಿದರೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮನುಷ್ಯನ ಎಲ್ಲ ಕಾರ್ಯಗಳು ಚೆನ್ನಾಗಿ ನಡೆಯಬೇಕಾದರೆ ದೇವರ ಅನುಗ್ರಹ ಅಗತ್ಯವಾಗಿ ಬೇಕು. ದೇವರ ಪ್ರಾರ್ಥನೆ ಇಲ್ಲದೆ ಯಾವುದೇ ಕೆಲಸವೂ ಪೂರ್ಣ ವಾಗಲ್ಲ.
ಭಗವಾನ್ ನಿತ್ಯಾನಂದರು ಸಾಮಾನ್ಯರ ಮನೆಯಲ್ಲಿ ಹುಟ್ಟಿ ಅಸಾಮಾನ್ಯ ವ್ಯಕ್ತಿತ್ವ ಹೊಂದಿದ್ದ ಓರ್ವ ಶ್ರೇಷ್ಠ ಸಂತ. ನಿತ್ಯಾನಂದರ ಈ ಮಂದಿರ ಮತ್ತಷ್ಟು ಶ್ರೇಯೋಭಿವೃದ್ದಿ ಕಾಣಲಿ ಎಂದು ಶುಭಹಾರೈಸಿದರು.

ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ಕನ್ಯಾಡಿ ಶ್ರೀಬ್ರಹ್ಮಾನಂದ ಸ್ವಾಮೀಜಿ, ಗೌರಿಗದ್ದೆ ಅವಧೂತ ವಿನಯ ಗುರೂಜಿ, ಸ್ವಿಜರ್‌ಲ್ಯಾಂಡ್ ಆಧ್ಯಾತ್ಮ ಗುರು ಶ್ರೀ ಮೋಹನ್ ಜೀ., ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿ, ಮಹಾಮಂಡಳೇಶ್ವರ ನಿತ್ಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಮುಂಬೈ ಉದ್ಯಮಿ ಕೆ.ಕೆ. ಆವರ್ಸೇಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್, ಮಾಜಿ ಸಚಿವ ರಮಾನಾಥ್ ರೈ, ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಅಧ್ಯಕ್ಷ ಕೊಡವೂರು ದಿವಾಕರ್ ಶೆಟ್ಟಿ, ಕೆ. ಮೋಹನ್‌ಚಂದ್ರನ್ ನಂಬಿಯಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಪಿ. ಶೆಟ್ಟಿ, ಶ್ರೀನಿತ್ಯಾನಂದ ವಿದ್ಯಾಕೇಂದ್ರದ ಉಪಾಧ್ಯಕ್ಷ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್, ನಗರಸಭೆ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಆರ್ಕಿಟೆಕ್ಟ್  ನಾಗೇಶ್ ಹೆಗ್ಡೆ, ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಮನೋಹರ್ ಎಸ್. ಶೆಟ್ಟಿ, ನಗರಸಭೆ ಸದಸ್ಯ ವಿಜಯ್ ಕುಮಾರ್ ಕೊಡವೂರು, ವಿ.ಕೆ. ಗ್ರೂಪ್‌ನ ಕೆ.ಎಂ. ಶೆಟ್ಟಿ, ಹರಿಪ್ರಸಾದ್ ಐತಾಳ್, ಗೌರವಾಧ್ಯಕ್ಷ  ಜಯಕೃಷ್ಣ ಶೆಟ್ಟಿ ತೋನ್ಸೆ, ಉದ್ಯಮಿ ರವಿ ಶೆಟ್ಟಿ ಮುಂಬೈ, ಉದ್ಯಮಿ ವಾಸುದೇವ ಶೆಟ್ಟಿ, ಭಾಸ್ಕರ್ ಶೆಟ್ಟಿ, ರಾಜೇಶ್ ರೈ, ಸದಾಶಿವ ಶೆಟ್ಟಿ ಕನ್ಯಾನ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದೇವಿಪ್ರಸಾದ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.