ನಿಟ್ಟೂರು ಅಡ್ಕದಕಟ್ಟೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಪ್ರಾರಂಭ

ಉಡುಪಿ: ಉಡುಪಿ ತಾಲೂಕಿನ ನಗರ ವ್ಯಾಪ್ತಿಯ ಗುಂಡಿಬೈಲು ಹಾಗೂ ಅಂಬಾಗಿಲು ಪ್ರದೇಶದ ಪಡಿತರದಾರರಿಗೆ ಅನುಕೂಲವಾಗುವಂತೆ ನಿಟ್ಟೂರು ಗ್ರಾಮದ ಅಡ್ಕದಕಟ್ಟೆಯ ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲಾಗಿದ್ದು, ಗುಂಡಿಬೈಲು ಹಾಗೂ ಅಂಬಾಗಿಲು ಪ್ರದೇಶದ ಪಡಿತರದಾರರು ಜನವರಿ ತಿಂಗಳಿಂದ ಸದ್ರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.