ಈ ಮಂಗಳವಾರದ ರಾಶಿ ಫಲದಲ್ಲಿ ವಿಶೇಷವೇನಿದೆ?ಇಲ್ಲಿದೆ ನೋಡಿ ಜೋತಿಷಿ ರಾಮಚಂದ್ರರಾವ್ ಹೇಳಿದ ಭವಿಷ್ಯ

ಸಾಯಿ ವೈಷ್ಣವಿ ಜ್ಯೋತಿಷ್ಯ
ಶಾಸ್ತ್ರಂ
ಭಗವತಿ ಭದ್ರಕಾಳಿ ಅಮ್ಮನವರ ಆರಾಧಕರ
ರಾಮಚಂದ್ರರಾವ್
9845307809

ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ನೆನೆದು ಮಂಗಳವಾರದ ರಾಶಿ ಫಲವನ್ನು ನೋಡೋಣ

ಮೇಷ ರಾಶಿ
:-ವ್ಯವಹಾರ ಮತ್ತು ಮನೆಯಲ್ಲಿಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅದನ್ನು ಮನೆಯ ಸದಸ್ಯರ ಜತೆ ಕುಳಿತು ಇಲ್ಲವೇ ಸಂಬಂಧಪಟ್ಟ ವ್ಯಕ್ತಿಗಳ ಸಮ್ಮುಖದಲ್ಲಿಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ವೃಷಭ ರಾಶಿ
:-ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮನೆಯಲ್ಲಿರಂಪಾಟ ಮಾಡುವುದು ತರವಲ್ಲ. ಇದರಿಂದ ಮನೆಯ ಇತರೆ ಸದಸ್ಯರಿಗೆ ಘಾಸಿ ಆಗುವುದು. ಯಾವುದಕ್ಕೂ ತಾಳ್ಮೆ ಇರಲಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಮಿಥುನ ರಾಶಿ
:- ಅನವಶ್ಯಕ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲದೇ ಇದ್ದಲ್ಲಿಮಾಡಿದ ಸಾಲ ದುಪ್ಪಟ್ಟಾಗಿ ಬೆಳೆಯುವ ಸಾಧ್ಯತೆ ಇದೆ. ಅದನ್ನು ತೀರಿಸುವಲ್ಲಿಸಾಕಷ್ಟು ಶ್ರಮ ಪಡಬೇಕಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಕಟಕ ರಾಶಿ
:- ಮಾತಿನಲ್ಲಿಮೃದುತ್ವ ಇರಲಿ. ವ್ಯವಧಾನ ಕಳೆದುಕೊಂಡು ಮಾತನಾಡಿದರೆ ನಿಮ್ಮನ್ನು ಇನ್ನಷ್ಟು ಬಿಕ್ಕಟ್ಟುಗಳು ತೀವ್ರವಾಗಿ ಕಾಡುವುವು. ಈ ಬಗ್ಗೆ ಎಚ್ಚರ ಅಗತ್ಯ ಇರಲಿ. ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ತೊಂದರೆ ಇಲ್ಲ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9845307809

ಸಿಂಹ ರಾಶಿ
:- ಧನಲಾಭದ ಕುರಿತಾದ ವಿಚಾರದಲ್ಲಿನಿಮ್ಮ ಕಾರ್ಯ ಯೋಜನೆಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ. ಕೆಲ ಉತ್ತಮ ಸಲಹೆಗಳು ಕೇಳಿ ಬರುವುವು. ನಂತರ ಹಣಕಾಸಿನ ವಿಲೇವಾರಿ ಇಲ್ಲವೆ ಶಾಶ್ವತ ಠೇವಣಿ ಇಡುವ ಬಗ್ಗೆ ಚಿಂತಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಕನ್ಯಾ ರಾಶಿ
:- ಧೈರ್ಯ ಕೈಕೊಡುತ್ತಿದೆ. ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಮುಂದೆ ಹೊಗಳುವ ಜನರೇ ನಿಮ್ಮ ಹಿಂದೆ ತೆಗಳುವವರು. ಅವರಿಂದ ದೂರ ಇರುವುದು ಒಳ್ಳೆಯದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ತುಲಾ ರಾಶಿ
:- ವ್ಯಾಪಾರ, ವ್ಯವಹಾರದಲ್ಲಿಮೋಸ ಮಾಡುವ ಜನರು ಇದ್ದಾರೆ. ಹಾಗಾಗಿ ಅವರ ಚಲನ, ವಲನಗಳನ್ನು ಗಮನಿಸಿದಲ್ಲಿಅವರು ಸಿಕ್ಕಿ ಬೀಳುವ ಸಾಧ್ಯತೆ ಅಧಿಕವಾಗಿದೆ. ಅದರ ಜತೆ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ವೃಶ್ಚಿಕ ರಾಶಿ
:- ವಿನಾಕಾರಣ ಕೋಪ ಹುಟ್ಟಿಸಿ ತಪ್ಪು ಮಾಡಿಸಿ ನಿಮಗೆ ತೊಂದರೆ ಕೊಡುವ ಪ್ರಯತ್ನವು ಕೆಲವರಿಂದ ಸಾಧ್ಯವಾಗಬಹುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಯನ್ನು ಸ್ಮರಿಸಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಧನುಸ್ಸು ರಾಶಿ
:- ಪ್ರಯತ್ನಶೀಲನಿಗೆ ಭಗವಂತನು ಒಲಿಯುತ್ತಾನೆ. ಅಂತೆಯೇ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗುವಲ್ಲಿವಿಳಂಬವಾಗಿರಬಹುದು. ಆದರೆ ಖಂಡಿತವಾಗಿಯೂ ನಿಮಗೆ ನ್ಯಾಯ ದೊರೆಯುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಮಕರ ರಾಶಿ
:- ಜೀವನ ಪರ್ಯಂತ ಸಾಮು ತೆಗೆದರೆ ಕುಸ್ತಿ ಆಡುವುದು ಯಾವಾಗ ಎನ್ನುವಂತೆ ಪ್ರತಿಬಾರಿಯೂ ಇನ್ನೊಬ್ಬರ ಅಣತಿಯಂತೆ ನಡೆಯುವುದನ್ನು ನಿಲ್ಲಿಸಿ. ನೀವು ಗಟ್ಟಿಯಾಗಿ ನಿಂತು ಆಡಳಿತ ನಡೆಸಿ. ಯಶಸ್ಸು ನಿಮ್ಮದಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಕುಂಭ ರಾಶಿ
:- ಆನಂದದಾಯಕ ವಾರ್ತೆಯನ್ನು ಕೇಳಲಿದ್ದೀರಿ. ಸದ್ಗುರು ಶ್ರೀ ಮಹಾವಿಷ್ಣುವನ್ನು ಭಕ್ತಿಯಿಂದ ಆರಾಧಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿವಿಧ ಮೂಲಗಳಿಂದ ಹಣ ಬರುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಮೀನ ರಾಶಿ
:- ಏನೇ ಕಿರಿಕಿರಿಗಳು ಬಂದರೂ ಅದನ್ನು ಎದುರಿಸುವಂತಹ ಧೈರ್ಯ ತೋರಿಸಲು ಪ್ರಸ್ತುತ ಸಂದರ್ಭದಲ್ಲಿಅವಕಾಶಗಳು ಜಾಸ್ತಿ ಇವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ. ಗುರುವಿನ ಕಾರುಣ್ಯದಿಂದ ಎಲ್ಲವೂ ಒಳಿತಾಗುವುದು,

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809

ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ
ಶಾಸ್ತ್ರಂ
ಜ್ಯೋತಿಷ್ಯ ಶಿರೋಮಣಿ ರಾಮಚಂದ್ರರಾವ್
9845307809