ಮಂಗಳೂರು: ಜ. 15 ರಂದು ರಚನಾ ಅವಾರ್ಡ್-2023 ಪ್ರದಾನ ಕಾರ್ಯಕ್ರಮ

ಮಂಗಳೂರು: ಕ್ಯಾಥೋಲಿಕ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಮಂಗಳೂರು ವತಿಯಿಂದ ನೀಡಲಾಗುವ ರಚನಾ ಅವಾರ್ಡ್-2023 ಅನ್ನು ಜ.15 ರಂದು ಸಂಜೆ 6 ಗಂಟೆಗೆ ಮಿಲಾಗ್ರಿಸ್ ಜುಬಿಲಿ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ ಪೀಟರ್ ಪೌಲ್ ಸಲ್ಡಾನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಚ್.ಡಿ.ಎಫ್.ಸಿ ಬ್ಯಾಂಕಿನ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಸಂಜಯ್ ಡಿ’ಸೋಜಾ ಭಾಗವಹಿಸಲಿದ್ದಾರೆ.

ಅಧ್ಯಕ್ಷ ವಿನ್ಸೆಂಟ್ ಕುಟೀನಾ, ಕಾರ್ಯದರ್ಶಿ ಲವೀನಾ ಎಸ್.ಮೊಂಟೆರಿಯೋ, ಸಂಚಾಲಕ ಸಿಎ ರುಡಾಲ್ಫ್ ರೊಡ್ರಿಗಸ್, ಸಹ ಸಂಚಾಲಕ ಟೈಟಸ್ ಎ ನೊರೊನ್ಹಾ ಉಪಸ್ಥಿತರಿರಲಿದ್ದಾರೆ.