ಪುತ್ತೂರು: ಅಪಘಾತದ ‌ವೇಳೆ ಕಲ್ಲು ತೂರಾಟ ಐವರ ಬಂಧನ

ಮಂಗಳೂರು: ಅಪಘಾತದ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಸಿದ್ದೀಕ್, ಕೆ.ಹಂಝ, ಹಬೀಬ್ ಫೈಸಲ್, ಅಬ್ದುಲ್  ಸಮೀರ್, ಇಸ್ಮಾಯಿಲ್ ಬಂಧಿತರು. ಪುತ್ತೂರು ಕಬಕ ಗ್ರಾಮದ ಪೋಳ್ಯದಲ್ಲಿ ಬಸ್-ಕಾರು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ‌ ಕಾರು ಚಾಲಕ ಅಬ್ದುಲ್‌ ಹಕೀಂ ಎಂಬುವರು ಮೃತಪಟ್ಟಿದ್ದರು.‌ ಅಪಘಾತಕ್ಕೆ ಸಂಬಂಧಿಸಿದಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸ್ ದಾಖಲಾಗಿ ಖಾಸಗಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದರು.
ಘಟನಾ ಸ್ಥಳದಲ್ಲಿ ಉದ್ರಿಕ್ತರು ಖಾಸಗಿ ಬಸ್ ಮೇಲೆ ಕಲ್ಲು ತೂರಿದ್ದರು. ಕಲ್ಲು ತೂರಾಟದ ಕುರಿತು ಖಾಸಗಿ ಬಸ್ ನ ಮಾಲಕ ದೂರು‌ ನೀಡಿದ್ದರು. ಸದ್ಯ ಪ್ರಕರಣದ ಸಂಬಂಧ ಐವರ ಬಂಧನವಾಗಿದೆ.