ಪಿ.ಎಫ್.ಐ ನಿಷೇಧ ರಾಷ್ಟ್ರ ವಿರೋಧಿಗಳಿಗೆ ಪಾಠ: ನಯನಾ ಗಣೇಶ್

ಉಡುಪಿ: ದೇಶದಲ್ಲಿ ಅಶಾಂತಿ ಮತ್ತು ಮತಿಯವಾದವನ್ನು ಪ್ರತಿಪಾದಿಸಿ ದೇಶ ವಿರೋಧಿಸಿ ಕೃತ್ಯದಲ್ಲಿ ತೊಡಗಿದ್ದ ಪಿ.ಎಫ್.ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಸ್ವಾಗತಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ದೇಶದ ಅನೇಕ ಕಡೆ ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ಹಲವು ವಿಧ್ವಂಸಕ ಚಟುವಟಿಕೆಯಲ್ಲಿ ಭಾಗಿಯಾಗಿ, ದೇಶದ ಐಕ್ಯತೆ ಗೆ ಪಿ.ಎಫ್.ಐ ಧಕ್ಕೆ ತಂದಿದ್ದು, ಭಯದ ವಾತಾವರಣ ಮೂಡಿಸುತ್ತ ಬಂದಿದೆ. ಅನೇಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಮೂಲಕ ರಾಷ್ಟ್ರೀಯತೆಯ ಧ್ವನಿಯ ಹುಟ್ಟಡಗಿಸುವ ಪ್ರಯತ್ನ ಮಾಡಿದ್ದು, ಇಂತಹ ರಾಷ್ಟ್ರ ವಿರೋಧಿ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವುದು ರಾಷ್ಟ್ರ ವಿರೋಧಿಗಳಿಗೆ ಪಾಠವಾಗಿದೆ, ರಾಷ್ಟ್ರದ ಭದ್ರತೆ ವಿಚಾರದಲ್ಲಿ ನಮ್ಮ ಪಕ್ಷ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ, ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತಿಸುತ್ತೇನೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.