ಪಡುಬಿದೆ: ಹೆಜ್ಜೇನು ದಾಳಿಯಿಂದ ಬಚಾವಾಗಲು ನೀರಿಗೆ ಹಾರಿ ಓರ್ವ ಮೃತ; ಇನ್ನೋರ್ವ ಗಂಭೀರ

ಪಡುಬಿದ್ರೆ: ಹೆಜ್ಜೇನು ದಾಳಿಯಿಂದ ಬಚಾವಾಗಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಪಡುಬಿದ್ರೆ ಬೀಚ್ ಬಳಿ ನಡೆದಿದೆ. ಪಡುಬಿದ್ರೆ ಬೀಚ್ ಬಳಿ ಇಬ್ಬರು ವ್ಯಕ್ತಿಗಳು ಅಡ್ಡಾಡುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದೆ ಎನ್ನಲಾಗಿದೆ. ಹೆಜ್ಜೇನು ಕಡಿತದಿಂದ ಬಚಾವಾಗಲು ಪ್ರಯತ್ನಿಸಿ ಇಬ್ಬರೂ ಕೂಡಾ ನೀರಿಗೆ ಹಾರಿದ್ದಾರೆ. ಘಟನೆಯಲ್ಲಿ ಓರ್ವ ಮೃತ ಪಟ್ಟಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ವಾಸುದೇವ ಡಿ.ಸಾಲಿಯಾನ್​(65) ಮೃತಪಟ್ಟವರು.

ಮೀನುಗಾರರಾಗಿರುವ ವಾಸುದೇವ ಸಾಲ್ಯಾನ್ ಹೆಜ್ಜೇನು ದಾಳಿ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲೇ ಸಮೀಪದ ಸಮುದ್ರದ ನೀರಿಗೆ ಹಾರಿದ್ದರೂ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ವಾಸುದೇವ ಸಾಲ್ಯಾನ್ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಚಂದ್ರಶೇಖರ್ (65) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ