ತೆಂಗಿನ ಮರದಿಂದ ನೀರಾ ಉತ್ಪಾದನೆ – ಪ್ರಾತ್ಯಕ್ಷಿಕೆ ಮತ್ತು ತರಬೇತಿ

ಉಡುಪಿ : ಕೇಂದ್ರೀಯ ಪ್ಲಾಂಟೇಷನ್ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಕೆ.ಬಿ. ಹೆಬ್ಬಾರ್ ಇವರ ವತಿಯಿಂದ ಫೆ. 8 ರಂದು ತೆಂಗಿನ ಮರದಿಂದ ನೀರಾ ಉತ್ಪಾದನೆ, ಪ್ರಾತ್ಯಕ್ಷಿಕೆ ಮತ್ತು ತೆಂಗಿನ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಹಮ್ಮಿಕೊಳ್ಳಲಾಗಿದೆ.

 ಆಸಕ್ತರು ಕೃಷಿ ವಿಜ್ಞಾನ ಕೇಂದ್ರದ ದೂರವಾಣಿ ಸಂಖ್ಯೆ: 0820-2563923 ಗೆ ಕರೆ ಮಾಡಿ ಹೆಸರು  ನೋಂದಾಯಿಸಿಕೊಳ್ಳುವಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.