ಎಲ್ಲಿ ಜಾರಿತೋ ಮನವು ಎನ್ನುತ್ತಲೇ ಸಾವಿಗೆ ಜಾರಿದ ಕನ್ನಡದ ಖ್ಯಾತ ಸಾಹಿತಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು

ಬೆಂಗಳೂರು: ಎಲ್ಲಿ ಜಾರಿತೋ ಮನವು.. ಎಲ್ಲೆ ಮೀರಿತೋ ಎಂದು ಬರೆದ ಕನ್ನಡದ ಖ್ಯಾತ ಸಾಹಿತಿ, ಖ್ಯಾತ ಕವಿ, ಭಾವಗೀತೆ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಕನ್ನಡ ಸಾಹಿತ್ಯ ಲೋಕವನ್ನು ಅಗಲಿದ್ದಾರೆ.

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾದರು.೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು.ಭಾವಗೀತೆಯ ಲೋಕಕ್ಕೆ ಹೊಸ ಆಯಾಮ ನೀಡಿದ ಇವರ ಕವಿತೆಗಳು ಕನ್ನಡ ಸಾಹಿತ್ಯಲೋಕದಲ್ಲಿ ಈಗಲೂ ಸದ್ದುಮಾಡುತ್ತಿರುತ್ತದೆ.ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ…ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಮೊದಲಾದ ಹಾಡುಗಳು ಈಗಲೂ ಪ್ರೇಮಿಗಳಲ್ಲಿ ವಿರಹ ಉಕ್ಕಿಸುತ್ತಿವೆ.