ಪಡುಬಿದ್ರಿ: ರೈಲು ಡಿಕ್ಕಿ ಹೊಡೆದು ಯುವಕ ಸಾವು

ಪಡುಬಿದ್ರಿ: ರೈಲು ಢಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಪಲಿಮಾರು ರೈಲ್ವೇ ಗೇಟ್ ಬಳಿ ನಡೆದಿದೆ. ಕವತ್ತಾರು ನಿವಾಸಿ ನಾಗೇಶ್ ಪೂಜಾರಿ (39) ಎಂದು ಮೃತ ದುರ್ದೈವಿ.‌ ಈತ ಪತ್ನಿ ಮರಣದ ಬಳಿಕ ಮಾಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಇಂದು ಪಲಿಮಾರು ಹೊಯಿಗೆ ಮಲ್ಲಮಾರ್ ಎಂಬಲ್ಲಿ ರೈಲ್ವೇ ಹಳಿಯ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ರೈಲೊಂದು ಢಿಕ್ಕಿಯಾಗಿದೆ. ಇದರಿಂದ ತೀವ್ರ ಗಾಯಗೊಂಡ ನಾಗೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ: ಇಂದಿನಿಂದ ಮಲಬಾರ್ ಗೋಲ್ಡ್ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ- ಮಾರಾಟ

ಉಡುಪಿ: ಇಲ್ಲಿನ ಗೀತಾಂಜಲಿ ಶೋಪರ್ ಸಿಟಿ ಕಟ್ಟಡದಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯಲ್ಲಿ ಆಯೋಜಿಸಲಾದ ಒಂಭತ್ತು ದಿನಗಳ ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿ ಶೋ ಕಾರ್ಯಕ್ರಮವು ಶನಿವಾರ ಉದ್ಘಾಟನೆಗೊಂಡಿತು. ಮಹೇಶ್ ಬೆಟ್ಟಿನ್, ಆಶಾ ಅಮೀನ್ ಮಲ್ಪೆ,ಬಿಂದು ತಂಗಪ್ಪನ್ ಅವರು ಕ್ರಮವಾಗಿ ಎರಾ, ಡಿವೈನ್ ಚಿನ್ನಾಭರಣ, ವಜ್ರಾಭರಣಗಳನ್ನು ಅನಾವರಣಗೊಳಿಸಿ ಸಂಸ್ಥೆಗೆ ಶುಭ ಹಾರೈಸಿದರು. ಉಡುಪಿ ಶೋರೂಮ್ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ಸುಕ್ಷ್ಮಾತಿ ಸೂಕ್ಷ್ಮ ಕುಸುರಿ ಕೆಲಸಗಳಿಂದ ನಿರ್ಮಿತ ಚಿನ್ನಾಭರಣಗಳು ಕುಶಲಕರ್ಮಿಗಳ ಕೌಶಲ್ಯ ವನ್ನು ಪ್ರತಿಪಾದಿಸುತ್ತದೆ. ಆರ್ಟಿಸ್ಟ್ರಿ ಬ್ರಾಂಡೆಡ್ […]

ಮುಂಡ್ಕೂರು: ಮಹಿಳೆ ನೇಣಿಗೆ ಶರಣು

ಕಾರ್ಕಳ: ಇಲ್ಲಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಚಾವಂಡಿಗುಡ್ಡೆಯ ಮನೆಯಲ್ಲಿ ವಾಸವಾಗಿದ್ದ ಫ್ಲೋರಿನ್ ಪಿಂಟೊ (52) ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಕಳೆದ ಮೂರು ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಹೊಳೆಯಲ್ಲಿ ಮುಳುಗಿ ಕಟ್ ಬೆಲ್ತೂರು ನಿವಾಸಿ ಮೃತ್ಯು

ಕುಂದಾಪುರ: ಕಟ್ ಬೆಲ್ತೂರು ಗ್ರಾಮದ ನಿವಾಸಿ ರಾಮ ಪೂಜಾರಿ (62) ಎಂಬವರ ಮೃತದೇಹವು ರಾಜಾಡಿ ಹೊಳೆಯಲ್ಲಿ ಮಾ. 5ರಂದು ಪತ್ತೆಯಾಗಿದೆ. ಇವರು 15 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಇದೇ ಖಿನ್ನತೆಯಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ: ಮೀನುಗಾರ ನಾಪತ್ತೆ

ಉಡುಪಿ: ಮಲ್ಪೆ ಬಂದರಿನಲ್ಲಿ ರಾಜ್‌ಕುಮಾರ್ ಎಂಬ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಕುಂದಾಪುರ ತಾಲೂಕು ನಾಡ ಗ್ರಾಮದ ಪಡುಕೋಣೆ ಕಡೆಕಟ್ಟೆ ಮನೆ ನಿವಾಸಿ ಪ್ರಕಾಶ್ (40) ಎಂಬುವವರು ಮಾರ್ಚ್ 14 ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.