ಮೋದಿ ಸಫಾಯೀ ಕರ್ಮಚಾರಿ‌ಗಳ ಕಾಲು ತೊಳೆದ ವಿಚಾರ, ಇದೊಂದು ಚುನಾವಣಾ ಗಿಮ್ಮಿಕ್ಕು, ಮತ್ತೇನೂ ಅಲ್ಲ: ಈಶ್ವರ್ ಖಂಡ್ರೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಐದು ಸಾವಿರ ಕೋಟಿ ಖರ್ಚು ಮಾಡ್ತಾರೆ. ಆದರೆ ಚುನಾವಣೆ ಬಂದಾಗ ಸಫಾಯಿ ಕರ್ಮಚಾರಿ ನೆನಪಾಗ್ತಾನೆ.ಇದು ಚುನಾವಣಾ ಗಿಮ್ಮಿಕ್ಕು, ಮತ್ತೇನೂ ಅಲ್ಲ.‌ ಕಾಂಗ್ರೇಸ್ ಯಾವತ್ತೂ ಗಿಮಿಕ್ಮಾ ಮತ್ತೇನೂ ಡಿಲ್ಲ. ನಮ್ಮದು ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಉಡುಪಿಯಲ್ಲಿ ಸೋಮವಾರ ‘ಪ್ರಧಾನಿ ಮೋದಿ ಸಫಾಯೀ ಕರ್ಮಚಾರಿ‌ಗಳ ಕಾಲು ತೊಳೆದ ವಿಚಾರ’ಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.  ನಾವು ಪೌರ ಕಾರ್ಮಿಕರನ್ನು ನಾವು ವಿದೇಶಕ್ಕೆ ಕಳಿಸಿದ್ದೇವೆ. ಅವರ ವೇತನ ಹೆಚ್ಚು ಮಾಡಿದ್ದೇವೆ. ಆದರೆ ಮೋದಿ ಬರೀ ಪ್ರಚಾರಕ್ಕೆ ಹೀಗೆಲ್ಲಾ ಮಾಡ್ತಾರೆ. ಪ್ರಧಾನಿ ಮೋದಿ ಕೊಟ್ಟ ಯಾವ ಭರವಸೆ ಯೂ ಅನುಷ್ಟಾನಕ್ಕೆ ಬಂದಿಲ್ಲ. ಬಿಜೆಪಿ ಭಾರತೀಯ ಜನತಾ ಪಾರ್ಟಿ ಅಲ್ಲ, ಈಗ ಅದು ಭಾರತೀಯ ಜೂಟಾ ಪಾರ್ಟಿ ಆಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಅಪಾಯದಲ್ಲಿದೆ. ಸಿಬಿಐ, ಇಡಿ ಇತ್ಯಾದಿ ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಸ್ವಯತ್ತೆ ಕಾಪಾಡಬೇಕಾಗಿದೆ ಎಂದರು.
ಮೂರು ಬಾರಿ ಸಿಎಂ ಸ್ಥಾನ ಕಳ್ಕೊಂಡೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಯಾವ ಸಂದರ್ಭದಲ್ಲಿ ಹೇಳಿದಾರೋ ಗೊತ್ತಿಲ್ಲ. ಅವರ ಅಧ್ಯಕ್ಷತೆಯಲ್ಲೇ 2013 ಚುನಾವಣೆ ಗೆದ್ದಿದ್ದೇವೆ. ಸರ್ಕಾರ ರಚನೆ ಮಾಡಿದ್ದೇವೆ. ಈಗಲೂ ಅವರ ನೇತೃತ್ವದಲ್ಲಿ ಕೆಲಸ ಮಾಡ್ತಿದ್ದೇವೆ. ಈಗಲೂ ಪರಮೇಶ್ವರ್ ನಮ್ಮ ಪಕ್ಷದ ಉತ್ತುಂಗ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಲಿಂಗಾಯಿತ- ವೀರ ಶೈವ ಎರಡೂ ಒಂದೇ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಸಚಿವನಾಗಿದ್ದಾಗಲೂ ಅದೇ ಅಭಿಪ್ರಾಯ ಹೇಳಿದ್ದೆ. ಈಗಲೂ, ಮುಂದೆಯೂ ನನ್ನ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ತಿಳಿಸಿದರು. ಜಯಪ್ರಕಾಶ್ ಹೆಗ್ಡೆ ಓರ್ವ ಪ್ರಾಮಾಣಿಕ ರಾಜಕಾರಣಿ. ನಮ್ಮ ಪಕ್ಷ ಅಥವಾ ಯಾವುದೇ ಜಾತ್ಯಾತೀತ ಪಕ್ಷಕ್ಕೆ ಬಂದ್ರೆ ಸ್ವಾಗತ. ಅವರು ಒಳ್ಳೇ ವ್ಯಕ್ತಿ ಕಾಂಗ್ರೆಸ್ ಗೆ ಬರಲಿ ಎಂದರು.