ಉಡುಪಿ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಸುಮಾರು 32 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಶನಿವಾರ ಸೇವಾ ನಿವೃತ್ತಿ ಹೊಂದಿದರು. ಇವರ ಬೀಳ್ಕೋಡುಗೆ ಸಮಾರಂಭ ನೌಕರ ಸಂಘದ ಸಭಾ ಭವನ ಕುಂಜಿಬೆಟ್ಟು ಇಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯ ನಿರ್ವಾಹಕ ಇಂಜಿನಿಯರ್ ರಾಕೇಶ್ ಕುಂದಾಪುರ ವಹಿಸಿದ್ದರು. ಇವರು ನರಸಿಂಹ ಪಂಡಿತ್ ದಂಪತಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನರಸಿಂಹ ಪಂಡಿತ್ ಇವರು ಉಡುಪಿ ವೃತ್ತದ ಅಧೀಕ್ಷಕರಾಗಿ ಉತ್ತಮ ಆಡಳಿತ, ಸಾಹಿತ್ಯ, ಕವಿತೆ ರಚನೆ ಮುಂತಾದ ಚಟುವಟಿಕೆಗಳ ಜೊತೆ ನೌಕರರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಮಾರ್ಗ ದರ್ಶನ ಮಾಡಿದ್ದರು ಎಂದರು.
ವೇದಿಕೆಯಲ್ಲಿ ಮೆಸ್ಕಾಂ ಅಧಿಕಾರಿಗಳಾದ ಪ್ರಶಾಂತ್ ಪುತ್ರನ್, ಕೆ ಮಾರಪ್ಪ , ಸತೀಶ್, ರಮೇಶ್, ದಯಾನಂದ, ಗಣರಾಜ್ ಭಟ್, ರಾಘವೇಂದ್ರ , ನರಸಿಂಹ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯ ನಿರ್ವಾಹಕ ಇಂಜಿನಿಯರ್ ಕೆ ಪ್ರಸನ್ನಕುಮಾರ್ ಸ್ವಾಗತಿಸಿದರು, ಗಿರೀಶ್ ಉಡುಪಿ ನಿರೂಪಿಸಿದರು.












