ಜನರ ಜೀವದ ಜತೆ ಬಿಜೆಪಿ ಶಾಸಕರ ಚೆಲ್ಲಾಟ: ರಮಾನಾಥ ರೈ 

ಮಂಗಳೂರು: ಅಧಿಕಾರದ ಮದದಲ್ಲಿ ಶಾಸಕರು ಕಾಲಹರಣ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸುತ್ತಿಲ್ಲ. ಜನರ ಜೀವನದ ಜತೆ ಜನಪ್ರತಿನಿಧಿಗಳು ಚೆಲ್ಲಾಟ ಆಡುತ್ತಿದ್ದಾರೆ.
ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ‌ ಬಿಜೆಪಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳನ್ನು ಯಾರು ತಡೆಗಟ್ಟಬೇಕು..? ಶಾಸಕರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ಜನರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಮಲದ ಕುದುರೆ ಆಪರೇಶನ್:
ಬಹುಮತ ಇಲ್ಲದೇ ಬಿಎಸ್ ವೈ ಹೇಗೆ ಸಿಎಂ ಆದರು ಎನ್ನುವುದೇ ಪ್ರಶ್ನೆಯಾಗಿದೆ.
ಯಾವ ಆಧಾರದಲ್ಲಿ ಬಿಎಸ್ ವೈ ಪ್ರಮಾಣ ವಚನ‌ ಸ್ವೀಕರಿಸಿದರು? ಕಾಂಗ್ರೆಸ್, ಜೆಡಿಎಸ್ ಬಿಟ್ಟು ಹೋದ ವಿಶ್ವನಾಥ್ ಪಕ್ಷ ನಿಷ್ಠೆ ‌ಬಿಟ್ಟಿದ್ದಾರೆ. ನನಗೂ ಗೃಹಸಚಿವನಾಗುವ ಆಫರ್ ಎರಡು ಸಲ ಬಂದಿತ್ತು. ನಿಷ್ಠಾವಂತ ಕಾರ್ಯಕರ್ತನಾಗಿ ಇರುವುದು ದೊಡ್ಡ ನಿಷ್ಠೆ
ಮುಂಬೈಗೆ ಹೋದವರು ಪಕ್ಷ ನಿಷ್ಠೆ ತೊರೆದು ಹೋದವರು ಎಂದು ರೈ ತಿಳಿಸಿದರು.