ಮಂಗಳೂರು: ಪೊಲೀಸ್ ಕಮಿಷನರ್ ಡಾ.ಪಿ. ಹರ್ಷ ವರ್ಗಾವಣೆ: ವಿಕಾಸ್ ಕುಮಾರ್ ನೇಮಕ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ. ಎಸ್ ಹರ್ಷ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.‌
ದೇಶದಾದ್ಯಂತ ಸುದ್ದಿಗೆ ಕಾರಣವಾಗಿದ್ದ ಮಂಗಳೂರು ಗೋಲಿಬಾರ್ ಪ್ರಕರಣ , ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಪ್ರಕರಣ ಇವರ ಅವಧಿಯಲ್ಲಿ ನಡೆದಿತ್ತು. ‌ಹರ್ಷ ಅವರನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಯ ಡಿಐಜಿ ಮತ್ತು ಕಮೀಷನರ್ ಆಗಿ ನೇಮಿಸಲಾಗಿದೆ. ಕಾರ್ಕಳ ಎ ಎನ್ ಎಫ್ ನಲ್ಲಿ ಐಜಿಪಿ ಯಾಗಿದ್ದ ವಿಕಾಸ್ ಕುಮಾರ್ ಅವರನ್ನು ಮಂಗಳೂರು ಪೊಲೀಸ್ ಕಮೀಷನರ್ ಆಗಿ ನೇಮಕಗೊಳಿಸಲಾಗಿದೆ.