ಮಂಗಳೂರು: ಔಷಧಿಗೆ ತೆರಳಿದ ಮಹಿಳೆಗೆ ಸಹಾಯ ಮಾಡಿದ ಎಎಸ್ಐಗೆ ಅಭಿನಂದನೆ

ಮಂಗಳೂರು: ಮಧ್ಯರಾತ್ರಿ ವೇಳೆ ಒಂಟಿ ಮಹಿಳೆಯೊಬ್ಬರು ತಂದೆಗೆ ಔಷಧಿ ತರಲು ಹೋದ ವೇಳೆ ಮಹಿಳೆಗೆ ಸಹಾಯ ಮಾಡಿದ ಕದ್ರಿ ಪೊಲೀಸ್ ಠಾಣೆಯ ಎಎಸ್ಐ ಸಂತೋಷ್ ಕುಮಾರ್ ಅವರ ಕಾರ್ಯವನ್ನು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಗುರುತಿಸಿ ಅಭಿನಂದಿಸಿದ್ದಾರೆ.
ಮಹಿಳೆ ತನ್ನ ತಂದೆಗೆ ನಡುರಾತ್ರಿ ಒಂದು ಗಂಟೆಯ ವೇಳೆಗೆ ಅನಾರೋಗ್ಯ ಉಂಟಾದಾಗ ಮೆಡಿಕಲ್ ಶಾಪ್ ಹುಡುಕಿಕೊಂಡು ಹೊರ ಬಂದಿದ್ದರು.
ಇ ವೇಳೆ ಮಹಿಳೆಯನ್ನು ಗಮನಿಸಿದ ಎಎಸ್​ಐ ಸಂತೋಷ್ ಅವರು ಮಹಿಳೆಯನ್ನು ತಮ್ಮ ​ವಾಹನದಲ್ಲಿ ಮೆಡಿಕಲ್ ಶಾಪ್​ಗೆ ಕರೆದುಕೊಂಡು ಹೋಗಿ ಮತ್ತೆ ಅವರ ಮನೆಗೆ ಬಿಟ್ಟಿದ್ದಾರೆ.
ಈ‌ ಕುರಿತು ಮಹಿಳೆ‌ ಪೊಲೀಸ್ ಕಮೀಷನರ್​​ಗೆ ವಿಚಾರ ತಿಳಿಸಿದ್ದು, ಎಎಸ್ಐ ಸಂತೋಷ್ ಕುಮಾರ್ ಅವರ ಕಾರ್ಯ ಮೆಚ್ಚಿ ಮಂಗಳೂರು ‌ಪೊಲೀಸ್ ಕಮೀಷನರ್ ಅಭಿನಂದಿಸಿದ್ದಾರೆ.