ಚೇತನ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಅಚಾರ್ಯ ಇವರಿಗೆ ಲಯನ್ ಅವಾರ್ಡ್

ಉಡುಪಿ: ಚೇತನ್ ಲಯನ್ಸ್ ಕ್ಲಬ್ ಉಡುಪಿ ಸಂಸ್ಥೆಗೆ ಎ. 9 ರಂದು ರಾಜ್ಯಪಾಲರು ಅಧಿಕೃತ ಭೇಟಿ ನೀಡಿ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.

ಪಂಚರತ್ನ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಬಾರಿ ನಡೆಸಿದ ವಿವಿಧ ಸಾಮಾಜಿಕ ಚಟುವಟಿಕೆ ಹಾಗೂ ವಿಶಿಷ್ಠ ಸಾಧನೆ ಗುರುತಿಸಿ ಅಧ್ಯಕ್ಷ ಜಗದೀಶ್ ಅಚಾರ್ಯ ಇವರಿಗೆ ಲಯನ್ ಅವಾರ್ಡ್ ಅನ್ನು ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೋ ನೀಡಿ ಗೌರವಿಸಿದರು.
ಲಯನ್ಸ್ ಕ್ಲಬ್ ವತಿಯಿಂದ ಸೇವಾ ಕಾರ್ಯ ಅಂಗವಾಗಿ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಾಯ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೋ ದಂಪತಿಗಳನ್ನು ಗೌರವಿಸಲಾಯಿತು.

                                                                                                                                                                                                                                                                                                                                   ಮುಖ್ಯ ಅತಿಥಿಗಳಾಗಿ  ಸಪ್ನಾ ಸುರೇಶ, ಅರುಣ್ ಕುಮಾರ್ ಶೆಟ್ಟಿ, ವರ್ವಾಡಿ ಪ್ರಸಾದ್ ಶೆಟ್ಟಿ , ರಾಜೀವ್ ಕೋಟ್ಯಾನ್ , ಪುಷ್ಪರಾಜ್  ಶೆಟ್ಟಿ  , ಪ್ರದೀಪ್ ಕುಮಾರ್ ಶೆಟ್ಟಿ , ರಾಜೇಶ್ ಶೆಟ್ಟಿ ಅತ್ರಾಡಿ ಹಾಗೂ ಸಂಸ್ಥೆಯ ಪಧಾಧಿಕಾರಿಗಳು ,ಸದಸ್ಯರು ಉಪಸ್ಥಿರಿದ್ದರು.