ಕೊಡವೂರು: ಬಸ್ ನಿಲ್ದಾಣಗಳನ್ನು ಸ್ವಚ್ಛ ಮಾಡುವ ಮೂಲಕ ಮೋದಿ ಜನ್ಮ ದಿನಾಚರಣೆ

ಕೊಡವೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಕೊಡವೂರಿನ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಸೇರಿಕೊಂಡು ಕೊಡವೂರು ವಾರ್ಡಿನಲ್ಲಿರುವ ಎಲ್ಲಾ ಬಸ್ ನಿಲ್ದಾಣಗಳನ್ನು ಸ್ವಚ್ಛ, ಸುಂದರಗೊಳಿಸುವ ಮೂಲಕ ಪ್ರಯಾಣಿಕರಿಗೆ ಒಳ್ಳೆಯ ವಾತಾವರಣ ಕಲ್ಪಿಸಿದ್ದೇವೆ. ನಾವೆಲ್ಲರೂ ಮೋದಿಯವರು ಹಾಕಿಕೊಟ್ಟ ಹೆಜ್ಜೆಗುರುತಿನಲ್ಲಿ ನಡೆಯಬೇಕು. ಬಸ್ ನಿಲ್ದಾಣ ಸ್ವಚ್ಛಗೊಳಿಸುವ ಈ ಕಾರ್ಯದಲ್ಲಿ ಹಲವಾರು ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ಕೊಡವೂರು ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು.

ಪ್ರಧಾನಿ ಮೋದಿ ಜನ್ಮ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿ ವಾರ್ಡಿನಲ್ಲಿರುವ ಎಲ್ಲ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಅವರು ಮಾತಾಡಿದರು.

ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಕೊಡವೂರು, ಪ್ರಶಾಂತ್ ಕೊಡವೂರು, ಕೃಷ್ಣ ಅಮೀನ ಮೂಡುಬೆಟ್ಟು,ಕೆ ಸುಂದರ ಪಾಲನ್, ಭಾಸ್ಕರ್ ಶೇರಿಗಾರ್,ಚಂದ್ರಕಾಂತ್ , ಸಂದೇಶ, ಕಿಶನ್ ಶೆಟ್ಟಿ, ಸುದೀಪ್, ವರುಣ್ ಮತ್ತಿತರರು ಹಾಜರಿದ್ದರು.