ಕಾರ್ಕಳದಲ್ಲಿ ಗೃಹಪ್ರವೇಶಕ್ಕೆ ಸಸಿ ವಿತರಣೆ

ಕಾರ್ಕಳ : ನಗರದ ಆನೆಕೆರೆಯ ಆರ್. ಮೋಹನಕೃಷ್ಣ ಪ್ರಭು ಅವರ ಪಾಂಡುರಂಗ ನಿವಾಸ ಗೃಹಪ್ರವೇಶಕ್ಕೆ ಆಗಮಿಸಿದವರಿಗೆ ವಿವಿಧ ಜಾತಿ ಹೂ ಗಿಡಗಳು, ಹಣ್ಣಿನ ಗಿಡಗಳು, ಮಲ್ಲಿಗೆ, ಕಣಗಿಲೆ, ದಾಸವಾಳ, ನಂದಿಬಟ್ಟಲು, ಸಾಗುವಾನಿ, ನೇರಳೆ, ಪೇರಳೆ, ದಾಳಿಂಬೆ, ಬಿರುಂಡಿ, ಹಲಸು, ಹೆಬ್ಬಲಸು, ಸೀತಾಫಲ, ಕಹಿಬೇವು, ಕರಿಬೇವು, ಇತ್ಯಾದಿ ಗಿಡಗಳನ್ನು ವಿತರಿಸಲಾಯಿತು.ಆ ಮೂಲಕ ಕಾರ್ಯಕ್ರಮ ಪರಿಸರ ಪ್ರೇಮಕ್ಕೆ ಸಾಕ್ಷಿಯಾಯಿತು.