ಕಾರ್ಕಳ: ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನ: ಸಂಘಟನೆ ಮುಖಂಡರಿಂದ ಆಕ್ರೋಶ

ಕಾರ್ಕಳ: ಮನೆಗೆ ಬಂದು ಬಡ ಹಿಂದೂ ಕುಟುಂಬಗಳನ್ನು ಮತಾಂತರ ಮಾಡಲು ಯತ್ನಿಸಿದ ಘಟನೆ ಕಾರ್ಕಳದ ನಂದಳಿಕೆಯ ಮಾವಿನಕಟ್ಟೆಯಲ್ಲಿ ಸೋಮವಾರ ನಡೆದಿದೆ.
ವಿವಿಧ ಪ್ರಚೋದನಾಕಾರಿ ಕರಪತ್ರಗಳು ಹಾಗೂ ಪುಸ್ತಕಗಳನ್ನು ತಂದು, ಹಲವು ರೀತಿಯ ಆಮಿಷವೊಡ್ಡಿ ಮತಾಂತಂತರಕ್ಕೆ ಯತ್ನಿಸುತ್ತಿದ್ದರು.
ಗಾಡ್ವಿನ್ ಎಂಬಾತ ತನ್ನ ಮಹಿಳಾ ಸದಸ್ಯರನ್ನು ಸೇರಿಸಿ ತಂಡ ರಚಿಸಿ ಮತಾಂತರ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.
ಹಿಂದೂ ಮುಖಂಡರಿಂದ ತರಾಟೆ:
ಮತಾಂತರ ನಡೆಸಲು ಬಂದ ತಂಡದ‌ ಬಗ್ಗೆ ವಿಷಯ ತಿಳಿದು ಅಲ್ಲಿಗೆ ಭೇಟಿ ನೀಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮತಾಂತರ ನಡೆಸಲು ಮುಂದಾದವರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದ್ದಾರೆ.
ಮಹೇಶ್ ಬೈಲೂರ್,‌ ಉಮೇಶ್ ಸೂಡ ಹಾಗೂ ಮತ್ತಿತರ ಮುಖಂಡರು ಸುಮ್ಮನೆ ನಮ್ಮನ್ನು ಕೆಣಕಿದರೆ  ಸಹಿಸಲಾಗದು ಎಂದು ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.