ತಂಪುಪಾನೀಯ ಫ್ಯಾಕ್ಟರಿಯಲ್ಲಿ ವಿದ್ಯುತ್ ಆಘಾತ: ರತ್ನವರ್ಮ ಜೈನ್ ವಿಧಿವಶ

ಕಾರ್ಕಳ: ತಾಲೂಕಿನ ಮುಂಡ್ಲಿಯಲ್ಲಿ ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ಉಂಟಾದ ವಿಧ್ಯುತ್ ಆಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ಮೃತರನ್ನು ಸಾಂತ್ರಬೆಟ್ಟು ರತ್ನ ವರ್ಮ ಜೈನ್(48) ಎಂದು ಗುರುತಿಸಲಾಗಿದೆ.
ರತ್ನ ವರ್ಮ ಜೈನ್ ಅವರು ತಂಪು ಪಾನೀಯ ತಯಾರಕ ಸಂಸ್ಥೆ ಯಲ್ಲಿ ಜನರೇಟರ್ ಆಫ್‌ ಮಾಡುವ ಸಂದರ್ಭದಲ್ಲಿ ವಿಧ್ಯುತ್ ಅಘಾತಕ್ಕೊಳಗಾಗಿ ಸ್ಥಳದಲ್ಲಿ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಇವರು ಕಂಬಳ ಕ್ಷೇತ್ರದಲ್ಲಿ  ಹಲವು ಸಾಧನೆಗಳನ್ನು ಮಾಡಿ ಗುರುತಿಸಲ್ಪಟ್ಟಿದ್ದರು.