ಕಾಪು: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿಜಯಯಾತ್ರೆ

ಕಾಪು: ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ನೂತನ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿಜಯೋತ್ಸವ ಶನಿವಾರ ಕ್ಷೇತ್ರದ ದಕ್ಷಿಣ ಬ್ಲಾಕ್ ನಲ್ಲಿ ಜರುಗಿತು.

ಶನಿವಾರ ಬೆಳಗ್ಗೆ ಮಟ್ಟು ಬೀಚ್ ನಿಂದು ಆರಂಭಗೊಂಡ ರೋಡ್ ಶೋ ಕೋಟೆ, ಕಟಪಾಡಿ, ಉದ್ಯಾವರ, ಸಂಪಿಗೆ ನಗರ, ಕಟಪಾಡಿ, ಕುರ್ಕಾಲು, ಬಂಟಕಲ್ಲು, ಶಿರ್ವ, ಕುತ್ಯಾರು, ಪಲಿಮಾರು, ಪಡುಬಿದ್ರಿ, ಹೆಜಮಾಡಿ, ಪಡುಬಿದ್ರಿ ತೆಂಕ, ಅದಮಾರು, ಎಲ್ಲೂರು, ಪಣಿಯೂರು, ಉಚ್ಚಿನ, ಮೂಳೂರು, ದೀಪ ಸ್ತಂಭ, ಕೈಪುಂ ಜಾಲು, ಕೋತಲ್ ಕಟ್ಟೆ ಕಾಪು ಪೇಟೆ ಮಜೂರು ಮೂಲಕ ಸಾಗಿ ಸಂಜೆ 7 ಗಂಟೆಗೆ ಕಳತ್ತೂರುವಿನಲ್ಲಿ ಸಮಾಪನ ಗೊಂಡಿತು. ಬಳಿಕ ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ಅಭಿನಂದನೆ ಸಮಾರಂಭ ನಡೆಯಿತು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ ಪ್ರಮುಖರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ.ಸುವರ್ಣ ಗಂಗಾಧರ ಸುವರ್ಣ, ಸುಮಾ ಶೆಟ್ಟಿ, ಅನಿಲ್ ಕುಮಾರ್, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುರೇಶ್ ಶೆಟ್ಟಿ, ಗುರ್ಮೆ ಯವರ ವಿಜಯೋತ್ಸವ ಮೆರವಣಿಗೆ ಶನಿವಾರ ಹೆಜಮಾಡಿ ತಲುಪಿದಾಗ ಗ್ರಾ.ಪಂ ಅಧ್ಯಕ್ಷ ಪಾಂಡುರಂಗ ಸಿ. ಕರ್ಕೇರಾ ನೇತೃತ್ವದಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು.