ಜೂ.21ರಂದು ಮಲೆಕುಡಿಯರ ಕುಂದು ಕೊರತೆ ಸಭೆ

ಕಾರ್ಕಳ: ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇವರ ಆಶ್ರಯದಲ್ಲಿ ಮಲೆಕುಡಿಯರ ಕುಂದು ಕೊರತೆ ಸಭೆ ಜೂ. 21(ಆದಿತ್ಯವಾರ)ರಂದು ಸಂಜೆ 3.30ಕ್ಕೆ ಮಾಳ ಪೇರಡ್ಕ ಸಂಘದ ಕೇಂದ್ರ ಕಚೇರಿಯಲ್ಲಿ ಜರಗಲಿದೆ.

ಈ ಸಭೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ಜಿಲ್ಲಾ ಮಲೆಕುಡಿಯ ಸಂಘದ ಪ್ರಕಟನೆ ತಿಳಿಸಿದೆ.