ಜು.13: ಐವನ್ ಡಿಸೋಜರಿಂದ ಕ್ರೈಸ್ತ ಬಾಂಧವರಿಗೆ ಜನಸ್ಪಂದನ ಕಾರ್ಯಕ್ರಮ

ಉಡುಪಿ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕ್ರೈಸ್ತ ಸಮಾಜ ಬಾಂಧವರಿಗಾಗಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಅವರು ಜು. 13ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿ ಮಿಷನ್‌ ಕಂಪೌಂಡ್‌ನ ಸಿಎಸ್‌ಐ ಬಾಯ್ಸ್‌ ಬೋರ್ಡಿಂಗ್‌ ಹೋಮ್‌ (ಸ್ನೇಹಾಲಯ)ನಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ ಒಕ್ಕೂಟದ ಜಂಟಿ ಕಾರ್ಯದರ್ಶಿ ಸ್ಟೀವನ್‌ ಕುಲಾಸೊ
ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಆಯಾ ಇಲಾಖೆಯ ಯೋಜನೆಗಳ ಮಾಹಿತಿ
ನೀಡುವರು. ಐವನ್‌ ಡಿಸೋಜ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ನಡೆಯಲಿದೆ. ಸ್ಥಳದಲ್ಲೇ ಸಮಸ್ಯೆಗಳ ಪರಿಹಾರ ಹಾಗೂ ಮಾರ್ಗದರ್ಶನ ಮಾಡುವರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚಕ್ಕೆ ಸಹಾಯ ಮಾಡಲಾಗುವುದು ಎಂದರು.
ಸಹಾಯಧನ ಪಡೆಯಲಿಚ್ಚಿಸುವವರು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಬಿಪಿಎಲ್‌ ಕಾರ್ಡ್‌, ಬ್ಯಾಂಕ್‌ ಖಾತೆಯ ನಕಲು ಪ್ರತಿ ಹಾಗೂ ಆಧಾರ್‌ ಕಾರ್ಡ್‌ ಪ್ರತಿಯನ್ನು ನೋಟರಿ ಸೀಲ್‌ನೊಂದಿಗೆ ಲಗತ್ತಿಸಬೇಕು. ಆಸ್ಪತ್ರೆಯ ಬಿಲ್‌, ಆಸ್ಪತ್ರೆಯ ಸಹಿ, ಸೀಲ್‌ ಅನ್ನು ಅರ್ಜಿಯೊಂದಿಗೆ ಹಾಜರುಪಡಿಸಬೇಕು ಎಂದರು.
ಸುಮುದಾಯದವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಲು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ (ಐಸಿಯು) ಒಕ್ಕೂಟವನ್ನು ಸ್ಥಾಪಿಸಲಾಗಿದ್ದು, ಇದರ ವತಿಯಿಂದ  ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಐಸಿಯು ಅಧ್ಯಕ್ಷ ಸುನೀಲ್‌ ಕಬ್ರಾಲ್‌ ಶಿರ್ವ, ಕಾರ್ಯದರ್ಶಿ
ಚಾರ್ಲ್ಸ್‌ ಆಂಬ್ಲರ್‌, ಉಪಾಧ್ಯಕ್ಷ ಮೆಲ್ವಿನ್‌ ಡಿಸೋಜಾ, ಪಿಆರ್‌ಒ ಡಿಯೋನ್‌
ಡಿಸೋಜಾ, ಶೀಲಾ ಜತ್ತನ್ನ ಇದ್ದರು.