ಜಗದೀಶ್ ಕೆಮ್ಮಣ್ಣು ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕುಂದಾಪುರ: ಜೆಸಿಐ ಇಂಡಿಯಾ ವಲಯ 15 ರ ಬೆಳವಣಿಗೆ, ಅಭಿವೃದ್ದಿ ಮತ್ತು ವ್ಯವಹಾರ ಸಮ್ಮೇಳನ ‘ವೃದ್ದಿ’ ಕಾರ್ಯಕ್ರಮವು ಜೆಸಿಐ ಶಂಕರನಾರಾಯಣದ ಆತಿಥ್ಯದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ ವೆನ್ಶನ್ ಸೆಂಟರ್ ನಲ್ಲಿ ಜು.23 ರಂದು ಜರುಗಿತು.

ಜೆಸಿಐ ಆಂದೋಲನದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ಕೋಟ ಮೂರ್ತೆದಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಹಿಂದುಳಿದ ವರ್ಗದ ಸಹಕಾರಿ ಸಂಸ್ಥೆಯನ್ನು ತನ್ನ ಕಾರ್ಯವೈಖರಿಯ ಮೂಲಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ ಹಾಗೂ ಪ್ರಶಸ್ತಿ ಪಡೆಯಲು ಕಾರಣರಾದ ಜಗದೀಶ್ ಕೆಮ್ಮಣ್ಣು ಅವರಿಗೆ 2023 ಸಾಲಿನ ‘ಉದ್ಯೋಗ ರತ್ನ’ ಪ್ರಶಸ್ತಿಯನ್ನು ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಪ್ರದಾನ ಮಾಡಿದರು.

ವೇದಿಕೆಯಲ್ಲಿ ಜೆಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ಅಲನ್ ರೋಹನ್ ವಾಜ್, ವಲಯ ಉಪಾಧ್ಯಕ್ಷೆ ಜಯಶ್ರೀ ಮಿತಕುಮಾರ್, ಜಿಸಿಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೆಂದ್ರಕುಮಾರ್, ಕಾರ್ಯದರ್ಶಿ ಲವಿನಾ ಲೂವಿಸ್, ಜೆಸಿರೇಟ್ ಅಧ್ಯಕ್ಷೆ ಶಾಲಿನಿ ಸುರೇಶ್, ಪೂರ್ವಾಧ್ಯಕ್ಷ ಚಿತ್ರಕುಮಾರ್, ರಾಜೇಶ್ ಟಿ ಆಚಾರ್ಯ, ತುಳಸಿದಾಸ್, ಅರುಣ್ ಕುಮಾರ್, ಮಿತ್ರ ಕುಮಾರ್, ಪ್ರಶಾಂತ್ ಆಚಾರ್ಯ, ಉಮೇಶ ಅಮೀನ್, ಆಶಾ ಅಲನ್, ವಿಜಯ್ ಸುವರ್ಣ, ರಮೇಶ ಕೋತ್ಯಾನ್, ಜೂನಿಯಸ್ ಲೂವಿಸ್ ಉಪಸ್ಥಿತರಿದ್ದರು.