ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ಪ್ರಥಮ ಪದಗ್ರಹಣ ಸಮಾರಂಭ

ಉಡುಪಿ: ಇಲ್ಲಿನ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಸೆಪ್ಟೆಂಬರ್ 18 ಭಾನುವಾರದಂದು ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘದ ಪ್ರಥಮ ಪದಗ್ರಹಣ ಸಮಾರಂಭವು ಜರುಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂತ ಜಾನ್ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೋಹನದಾಸ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವ ಅಧ್ಯಕ್ಷರಾಗಿ: ಸದಾಶಿವ ಶೆಟ್ಟಿ, ಸಲಹೆಗಾರರಾಗಿ: ವಸಂತ ಕುಮಾರ್ ಉಡುಪಿ, ಪದ್ಮನಾಭ ಜತನ್ ( ಅನ್ನು) ,ಪೌಲ್ ಸಿಜು, ಅಧ್ಯಕ್ಷರಾಗಿ: ಪೂರ್ವ ಸ್ವಾಮ್ಯದ ವಾಹನ ಮಾರಾಟಗಾರರ ಸಂಘ ಉಡುಪಿಯ ಸ್ಥಾಪಕಾಧ್ಯಕ್ಷ ಮೊಹಮದ್ ಅಶ್ರಫ್ ಉಡುಪಿ ಕಾರ್ರ್ಸ್, ಉಪಾಧ್ಯಕ್ಷರಾಗಿ: ವಲೇರಿಯನ್ ಪೈಸ್, ಮೂದಸರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಯಾಗಿ: ಉದಯ ಕಿರಣ್ ಮಣಿಪಾಲ ಮೋಟಾರ್ಸ್ ,
ಜೊತೆ ಕಾರ್ಯದರ್ಶಿಗಳಾಗಿ : ನಿತಿನ್ ಕುಂದಾಪುರ, ಪ್ರಶಾಂತ್ ಮಣಿಪಾಲ, ಗಿರೀಶ್ ಮಣಿಪಾಲ,
ಕೋಶಾಧಿಕಾರಿಯಾಗಿ: ಸಜಿ ಪಿಳ್ಳೆ, ಸಂಘಟನಾ ಕಾರ್ಯದರ್ಶಿಯಾಗಿ: ನವೀನ್ ಉದ್ಯಾವರ, ಶಾರಿಕ್ ಹಿರಯಡ್ಕ,
ಕ್ರೀಡಾ ಕಾರ್ಯದರ್ಶಿಯಾಗಿ: ಆಲ್ವಿನ್ ಪಿಂಟೋ, ಶಶಿಧರ್ ಶೆಟ್ಟಿ ಹಾಗೂ ಸದಸ್ಯರಾಗಿ ರಾಮಕೃಷ್ಣ , ರಾಗು ಮಣಿಪಾಲ ಆಯ್ಕೆಯಾಗಿದ್ದಾರೆ. ಮೋಹದಾಸ್ ಶೆಟ್ಟಿ ಪದಾಧಿಕಾರಿಗಳ ಆಯ್ಕೆಯನ್ನು ನೆರೆವೇರಿಸಿದರು.

ಉಡುಪಿ ನಗರ ಠಾಣಾ ಉಪಾಧಿಕಾರಿ ವಾಸಪ್ಪ ನೈಕ್ , ಸಂಚಾರಿ ಠಾಣಾಧಿಕಾರಿ ಅಬ್ದುಲ್ ಖಾದರ್, ದ.ಕ ವಾಹನ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ಮತ್ತು ಜಯರಾಜ್ ಕೋಟ್ಯಾನ್, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಹಾಗು ಸಂಘದ ಗೌರವ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಹಾಗೂ ಉದಯ ಕಿರಣ್ ಉಪಸ್ಥಿತರಿದ್ದರು.

ಮೊಹಮದ್ ಅಶ್ರಫ್ ಸ್ವಾಗತಿಸಿದರು. ಉದಯ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಲ್ವಿನ್ ಪಿಂಟೋ, ಪ್ರಶಾಂತ್ ಕುಮಾರ್ ವಂದಿಸಿದರು. ರಾಝಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.