ಪುಲ್ವಾಮಾ‌ದಲ್ಲಿ ಇಬ್ಬರು ಭಯೋತ್ಪಾದಕರನ್ನು ಡಿಶುಂ‌ ಮಾಡಿದ ಸೇನೆ:ಸೇಡು ತೀರಿಸಿಯೇ ಬಿಟ್ಟಿತು ನಮ್ಮ ಭಾರತೀಯ ಸೇನೆ

ರಾಷ್ಟ ಸುದ್ದಿ: ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಕಂಬನಿ‌ ಇಡೀ ದೇಶವನ್ನು ಆವರಿಸಿಕೊಂಡಿರುವ  ಹೊತ್ತಿನಲ್ಲೇ.ಭಾರತೀಯ ಸೇನೆ‌ ಭಯೋತ್ಪಾದಕರನ್ನು ಹತ್ಯೆಗೈದ ಸುದ್ದಿಗೆ ಇಡೀ ದೇಶವೇ ಪಾಕ್ ವಿರುದ್ದ ಸೇಡು ತೀರಿಸಿಕೊಂಡ ಉತ್ಸಾಹದಲ್ಲಿದೆ.
ಹೌದುಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಹಾಗೂ ಜೈಶ್ ಎ ಮಹಮ್ಮದ್ ನ ಕಮಾಂಡರ್ ಕಮ್ರಾನ್ ನನ್ನು ಭಾರತೀಯ ಸೇನೆ ಇಂದು ಮುಂಜಾನೆ ಹೊಡೆದುರುಳಿಸಿ ತನ್ನ‌ ಸೇಡು ತೀರಿಸಿಯೇಬಿಟ್ಟಿದೆ.ಮುಂಜಾನೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ‌ ಸುರಿಮಳೆ ನಡೆದಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.ತಡರಾತ್ರಿ‌ ನಡೆದ ಮುಖಾಮುಖಿಯಲ್ಲಿ ಭಾರತೀಯ ಸೇನೆಯ ಹಿರಿಯ ಕಮಾಂಡರ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.ಇಂದು ಕೂಡ ಭರ್ಜರಿ ಕಾರ್ಯಾಚರಣೆ ನಡೆಯಲಿದ್ದು ಇನ್ನುಳಿದ ಉಗ್ರರನ್ನು ಭಾರತೀಯ ಸೇನೆ ಮಟ್ಟ ಹಾಕಿಯೇ ಹಾಕುತ್ತದೆ‌ ಎನ್ನುವ ನಿರೀಕ್ಷೆಯಲ್ಲಿ ಇಡೀ ದೇಶ ಕಾಯುತ್ತಿದೆ