ಭಯೋತ್ಪಾದನೆಯ ಪರ ವಕಾಲತ್ತು ಬೇಡ: ಅಂತರಾಷ್ಟ್ರೀಯ ಇಸ್ಲಾಮಿಕ್ ಸಹಕಾರ ಸಂಘಟನೆಗೆ ಭಾರತದ ಛಾಟಿ ಏಟು

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ, ಲಕ್ಷಾಂತರ ಕಾಶ್ಮೀರಿ ಪಂಡಿತರ ನರಮೇಧ ಮತ್ತು ಪಲಾಯನಕ್ಕೆ ಕಾರಣನಾದ ಯಾಸಿನ್ ಮಲಿಕ್ ವಿರುದ್ಧದ ನ್ಯಾಯಾಲಯದ ತೀರ್ಪಿನ ವಿರುದ್ದ ನವದೆಹಲಿಯನ್ನು ಟೀಕಿಸಿದ ಇಸ್ಲಾಮಿಕ್ ಸಹಕಾರ ಸಂಘಟನೆ- ಸ್ವತಂತ್ರ ಶಾಶ್ವತ ಮಾನವ ಹಕ್ಕುಗಳ ಆಯೋಗದ ಟಿಪ್ಪಣಿಗಳನ್ನು ಭಾರತವು “ಸ್ವೀಕಾರಾರ್ಹವಲ್ಲ” ಎಂದು ಬಣ್ಣಿಸಿದೆ.

ವಿಶ್ವವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಬಯಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ ಮತ್ತು ಯಾವುದೇ ರೀತಿಯಲ್ಲಿ ಅದನ್ನು ಸಮರ್ಥಿಸಬೇಡಿ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಗೆ ಎಚ್ಚರಿಕೆ ನೀಡಿದ್ದಾರೆ.

ಯಾಸಿನ್ ಮಲಿಕ್ ಪ್ರಕರಣದ ತೀರ್ಪಿಗೆ ಭಾರತವನ್ನು ಟೀಕಿಸುವ ಒಐಸಿ-ಐ ಪಿ ಎಚ್ ಆರ್ ಸಿ ಮಾಡಿದ ಟಿಪ್ಪಣಿಗಳು ಸ್ವೀಕಾರಾರ್ಹವಲ್ಲ ಎಂದು ಭಾರತವು ಕಂಡುಕೊಳ್ಳುತ್ತದೆ, ಎಂದು ಬಾಗ್ಚಿ ಹೇಳಿದ್ದಾರೆ.

ಈ ಟಿಪ್ಪಣಿಗಳ ಮೂಲಕ, ಸಾಕ್ಷಿ ಆಧಾರ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಯಾಸಿನ್ ಮಲಿಕ್‌ನ ಭಯೋತ್ಪಾದಕ ಚಟುವಟಿಕೆಗಳಿಗೆ ಒಐಸಿ-ಐ ಪಿ ಎಚ್ ಆರ್ ಸಿ ಪರೋಕ್ಷವಾಗಿ ಬೆಂಬಲವನ್ನು ವ್ಯಕ್ತಪಡಿಸಿದೆ. ಜಗತ್ತು ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಯನ್ನು ಬಯಸುತ್ತದೆ ಮತ್ತು ಅದನ್ನು ಯಾವುದೇ ರೀತಿಯಲ್ಲಿ ಸಮರ್ಥಿಸದಂತೆ ನಾವು ಒಐಸಿಯನ್ನು ಒತ್ತಾಯಿಸುತ್ತೇವೆ, ಎಂದು ಅವರು ಹೇಳಿದ್ದಾರೆ.