ಸೂರಿಲ್ಲದ ಕುಟುಂಬಕ್ಕೆ ಬೇಕಿದೆ ನೆರವು:ನಿಮ್ಮ ಸಹಾಯವೇ ಈ ಕುಟುಂಬಕ್ಕೆ ಬೆಳಕು

ಉಡುಪಿ : ಕಟಪಾಡಿ ಕೋಟೆ ಗ್ರಾಮ ದೇವರತೋಟದ ನಾಟಿ ವೈದ್ಯ ದಿ.ಕೊರಗ ಶೆಟ್ಟಿ ಕುಟುಂಬ ವಾಸಿಸಲು ಒಂದು ಅಚ್ಚುಕಟ್ಟಾದ ಮನೆ ಇಲ್ಲದೆ ಕಳೆದ 70 ವರ್ಷಗಳಿಂದ ಕಷ್ಟದಿಂದ ದಿನ ಕಳೆಯುತ್ತಿದೆ .ಪ್ರಸ್ತುತ ಈ ಮನೆಯಲ್ಲಿ ವಾಸವಿರುವ ದಿ.ಕೊರಗ ಶೆಟ್ಟಿ ಅವರ ಸೊಸೆ ರಾಜೀವಿ ಶೆಟ್ಟಿ(70) ಅವರ ಮನೆ ಬಿದ್ದು, ಪ್ಲಾಸ್ಟಿಕ್‌ ಹಾಳೆ ಹೊದೆಸಿ ಬದುಕು ಸಾಗಿಸುತ್ತಿರುವುದನ್ನು ಮನಗಂಡ ಸಮಾಜ ಸೇವಕಿ ವೈಶಾಲಿ ಶೆಟ್ಟಿ ಅವರು ಕತಾರ್‌ ಬಂಟರ ಸಂಘದವರನ್ನು ಸಂಪರ್ಕಿಸಿದ್ದು, ಸ್ಪಂದಿಸಿದ ಸಂಘವು ಸದಸ್ಯ ನಿತ್ಯಾನಂದ ಶೆಟ್ಟಿ ಅವರ ಮುಖಾಂತರ ರೂ.60 ಸಾವಿರ ಮತ್ತು  ನಿತ್ಯಾನಂದ ಶೆಟ್ಟಿ ವೈಯಕ್ತಿಕ ಆಸಕ್ತಿಯಲ್ಲಿ 40 ಸಾವಿರ ರೂ, ಮಸ್ಕತ್ ಬಂಟರ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಕಾಪು  50 ಸಾವಿರ ರೂ ಹಾಗೂ ಬಹರೈನ್  ಬಂಟರ ಸಂಘದ ಅಧ್ಯಕ್ಷ  ಪ್ರದೀಪ್ ಶೆಟ್ಟಿ ಅವರ ಮುಖಂತರ 50 ಸಾವಿರ ರೂ ಚೆಕ್ ನ್ನು ರಾಜೀವಿ ಶೆಟ್ಟಿ ಅವರಿಗೆ  ಹಸ್ತಾಂತರಿಸಿದರು .ಈ ಸಂದರ್ಭ ವಿದ್ಯಾಲತಾ ಶೆಟ್ಟಿ, ಡಾ|ಯು.ಕೆ. ಶೆಟ್ಟಿ ಕಟಪಾಡಿ, ಮೂಡಬೆಟ್ಟು ಗುತ್ತು ಅಶೋಕ್‌ ಶೆಟ್ಟಿ, ನವೀನ್‌ ಶೆಟ್ಟಿ ಬೆಂಗಳೂರು, ಎ.ಬಿ. ಶೆಟ್ಟಿ ಬೆಂಗಳೂರು, ವೈಶಾಲಿ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಹರೀಶ್‌ ಶೆಟ್ಟಿ ಗೋವಾ, ರಾಜೀವಿ ಶೆಟ್ಟಿ ಮನೆಯವರು ಉಪಸ್ಥಿತರಿದ್ದರು.

ನಿಮ್ಮ ಸಹಾಯವೇ ಈ ಕುಟುಂಬಕ್ಕೆ ಬೆಳಕು:
 ಈ ಕುಟುಂಬಕ್ಕೆ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಿಕೊಡಲು ಈಗಾಗಲೇ ಬಂಟರ ಸಂಘಟನೆಗಳು ಕಾರ್ಯಪ್ರವೃತ್ತವಾಗಿದೆ. ಈ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಕುಟುಂಬಕ್ಕೆ ಸೂರು ಕಲ್ಪಿಸಿಕೊಡಲು ಸಮಾಜದ ಸಂಘಟನೆಗಳು ಸೇರಿದಂತೆ ಸಹೃದಯಗಳು ದಾನಿಗಳು ಇನ್ನಷ್ಟು ನೆರವು ಬೇಕಿದೆ. ಈ ಕುಟುಂಬಕ್ಕೆ ಸ್ವಂತ ಸೂರನ್ನು ನಿರ್ಮಿಸಲು  ಸಮಾಜ ಸೇವಕಿ ವೈಶಾಲಿ ಶೆಟ್ಟಿ , ಬನ್ನಂಜೆ ಲಯನ್ಸ್ ಕ್ಲಬ್ ಅಧ್ಯಕ್ಷ ವಿದ್ಯಾ ಲತಾ ಯು ಶೆಟ್ಟಿ ಇವರು ಈ ಕುಟುಂಬಕ್ಕೆ ರೂ 6 ಲಕ್ಷ ವೆಚ್ಚದ ಮನೆ ನಿರ್ಮಿಸಿಕೊಡುವ ಗುರಿ ಹೊಂದಿದ್ದಾರೆ. ಈಗಾಗಲೇ ರೂ 3.5 ಲಕ್ಷ ಸಂಗ್ರಹವಾಗಿದೆ. ಇನ್ನಷ್ಟು ನೆರವಿನ ಅಗತ್ಯವಿದ್ದು ದಾನಿಗಳು
ರಾಜೀವಿ ಶೆಟ್ಟಿ ,ಕಟಪಾಡಿ ವಿಜಯ ಬ್ಯಾಂಕಿನ ಖಾತೆ ಸಂಖ್ಯೆ;114801011003176
IFSC Code;VIJB000148 ಅರ್ಥಿಕ ನೆರವು ನೀಡಬಹುದು .

 

ಮಸ್ಕತ್ ಬಂಟರ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಕಾಪು ಅವರ ಮುಖಂತರ 50 ಸಾವಿರ ರೂ ಚೆಕ್ ನ್ನುರಾಜೀವಿ ಶೆಟ್ಟಿ ಅವರಿಗೆ     ಹಸ್ತಾಂತರಿಸಿದರು . 
ಕತಾರ್‌ ಬಂಟರ ಸಂಘದ ಸದಸ್ಯ ನಿತ್ಯಾನಂದ ಶೆಟ್ಟಿ ಅವರ ಮುಖಾಂತರ ರೂ.60 ಸಾವಿರ ಮತ್ತು  ನಿತ್ಯಾನಂದ ಶೆಟ್ಟಿ ವೈಯಕ್ತಿಕ ಆಸಕ್ತಿಯಲ್ಲಿ 40 ಸಾವಿರ ರೂ ಚೆಕ್ ನ್ನುರಾಜೀವಿ ಶೆಟ್ಟಿ ಅವರಿಗೆ  ಹಸ್ತಾಂತರಿಸಿದರು .