ಕುಂದಾಪುರ: ಮೂಡುಗಿಳಿಯಾರಿನಲ್ಲಿ ನಿರ್ಮಾಣವಾದ ಪ್ರಾಚೀನ ದೇಗುಲದ ವಾಸ್ತು ವಿನ್ಯಾಸ ಹೊಂದಿರುವ ಜಗತ್ತಿನ ಪ್ರಥಮ ಯೋಗ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪ್ರತಿಷ್ಠಾನ “ಯೋಗಬನ” ಫೆಬ್ರವರಿ 1 ರಂದು ಲೋಕಾರ್ಪಣೆಗೊಳ್ಳಲಿದೆ. ಕೋಟ ಡಿವೈನ್ ಪಾರ್ಕ್ನ ಅಂಗಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವ ಹಚ್ಚಹಸಿರಿನ ರಮಣೀಯ ವಿಶಾಲವಾದ ಪರಿಸರದಲ್ಲಿ ಅಂದಾಜು 20ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಆಯುಶ್ ವಿಭಾಗದಲ್ಲಿ ದೇಶದ ಪ್ರಥಮ ಪರಿಸರಸ್ನೇಹಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಿಸಲಾಗಿದ್ದು ನೋಡುಗರನ್ನು ಕೈಬೀಸಿ ಬರೆಯುತ್ತಿದೆ.
35 ಅಡಿ ಎತ್ತರದ ವಿವೇಕಾನಂದರ ಪ್ರತಿಮೆ:
ಆಸ್ಪತ್ರೆಯ ಕಟ್ಟಡದ ಮಧ್ಯಭಾಗದಲ್ಲಿ ಬರೋಬ್ಬರಿ 35ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದು ಜಗತ್ತಿನಲ್ಲೇ ಅತೀ ಎತ್ತರದ ಪ್ರತಿಮೆಯಾಗಿದ್ದು, ಪ್ರತಿಮೆಗೆ ವಿಶೇಷ ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹಸಿರು ಹುಲ್ಲು ಹಾಸಿನ ನಡುವೆ ತಲೆ ಎತ್ತಿ ನಿಂತಿರುವ ಯೋಗ ಆಸ್ಪತ್ರೆ ಲೋಕಾರ್ಪಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದಾರೆ. ಜಗತ್ತಿನ ಅತೀ ಎತ್ತರದ ಸ್ವಾಮೀ ವಿವೇಕಾನಂದರ ಪ್ರತಿಮೆಯನ್ನು ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್ ನಾಗೇಂದ್ರ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿವೇಕ್ ಉಡುಪ ತಿಳಿಸಿದ್ದಾರೆ.
ಏನಿದೆ?ಹೇಗಿದೆ?
ಭವ್ಯ, ಮನೋಹರ, ಪ್ರಶಾಂತ ಪರಿಸರ ಸಂಪೂರ್ಣವಾಗಿ ಪರಿಸರಸ್ನೇಹಿ ಭಾರತದ ಮೊದಲ ಸ್ಪಿರಿಚ್ಯೂವಲ್ ಹೀಲಿಂಗ್ ಸೆಂಟರ್ ಸ್ವಾಮಿ ವಿವೇಕಾನಂದರ ಅತ್ಯಾಕರ್ಷಕ 35ಅಡಿ ಎತ್ತರದ ರೋಮಾಂಚಕ ಹಾಲುಗಲ್ಲಿನ ಪ್ರತಿಮೆ ಸುಮಾರು 1.2 ಕಿ.ಮೀ ವ್ಯಾಪ್ತಿಯ ವಿಶಾಲವಾದ ಚಿತ್ತಾಖರ್ಷಕ ವಾಕಿಂಗ್ ಟ್ರ್ಯಾಕ್ ದೈಹಿಕ ಶಕ್ತಿವೃದ್ದಿಗೆಂದೇ ಸುಂದರವಾದ ಸೈಕಲ್ ಟ್ರ್ಯಾಕ್ ಸಹಸ್ರ ಮಂದಿ ಕುಳಿತು ಆನಂದಿಸುವ ಅತ್ಯಪರೂಪದ ಆಂಫೀ ಥಿಯೇಟರ್ ಪ್ರಾಚೀನ ದೇಗುಲದ ವಾಸ್ತುಶಿಲ್ಪ ವಿನ್ಯಾಸದಂತೆ ನಿರ್ಮಿಸಲಾದ ಅತ್ಯಾಕರ್ಷಕ ಮಂದಿರ ವೈಭವ ಪ್ರಕೃತಿ ಚಿಕಿತ್ಸೆ, ಜಲ ಚಿಕಿತ್ಸೆ, ಮಾಲೀಶು ಸಿಕಿತ್ಸೆ, ಯೋಗ ಚಿಕಿತ್ಸೆ, ಬೆಳಕು ಚಿಕಿತ್ಸೆ, ಸಂಗೀತ ಚಿಕಿತ್ಸೆ, ಹಾಸ್ಯ ಚಿಕಿತ್ಸೆ, ಆಹಾರ ಚಿಕಿತ್ಸೆ, ಹಸಿರು ಚಿಕಿತ್ಸೆಯೇ ಮೊದಲಾದ ಸರ್ವಫಲಕಾರಿ ಚಿಕಿತ್ಸೆಗಳ ಸಾರ ಸಂಗಮ ಮನೋಬಲ, ಆತ್ಮಬಲ, ಬಾಹುಬಲಗಳ ಅಪರೂಪದ ಭಾವ ಸತ್ಯ ಸಂಗಮ ಚುಚ್ಚುಮದ್ದು, ಟಾನಿಕ್, ಮುಲಾಂಉ, ಗುಳಿಗೆಗಳ ರಗಳೆಯೇ ಇಲ್ಲದ ನವಶಕ್ತಿ ಸಾಮಥ್ರ್ಯದ ನಿತ್ಯ ಸಂಜೀವಿನಿಗಳ ಸಾರಸರ್ವಸ್ವದ ಸದವಕಾಶ ಫೆಬ್ರವರಿ 2020 ರಿಂದ ಕಾರ್ಯೋನ್ಮುಖವಾಗಲಿರುವ ಅನನ್ಯ, ಅತ್ಯಪರೂಪದ ಚಿಕಿತ್ಸಾ ಮೇಳ ಮೊದಲಾದ ವೈಭವ ಇಲ್ಲಿದೆ.












