ಕಳತ್ತೂರು: ಅಪರಾಧ ಮಾಸ ತಡೆ ಮಾಸಚರಣೆ ಕಾರ್ಯಕ್ರಮ

ಕಳತ್ತೂರು: ಕಳತ್ತೂರು ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಸಭಾಂಗಣದಲ್ಲಿ ಶಿರ್ವ ಪೊಲೀಸ್ ಠಾಣಾ ವತಿಯಿಂದ ಗುರುವಾರದಂದು ನಡೆದ ಅಪರಾಧ ಮಾಸ ತಡೆ ಮಾಸಚರಣೆ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ, ಹೆತ್ತವರು ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳನ್ನು ನೀಡದೆ ವಾಹನ ಚಾಲನೆ ಪರವಾನಿಗೆ ಪಡೆದ ನಂತರವಷ್ಟೆ ವಾಹನವನ್ನು ನೀಡಿ, ಹೆತ್ತವರು ಜಾಗ್ರತೆ ವಹಿಸಿ ಮಕ್ಕಳನ್ನು ಅಪಾಯದಿಂದ ರಕ್ಷಿಸಿಕೊಳ್ಳಬೇಕು. ಮಾದಕ ದ್ರವ್ಯಗಳ ಕುರಿತು ಎಚ್ಚರಿಕೆಯಿಂದಿರಬೇಕು. ಎಲ್ಲಾ ವಾಹನ ಮಾಲಕರು ತನ್ನ ವಾಹನದ ನಾಲ್ಕು ಬಗೆಯ ದಾಖಲೆಯನ್ನು ವಾಹನದಲ್ಲಿರಿಸಿ ತಪಾಸಣೆ ಸಮಯದಲ್ಲಿ ಸಹಕರಿಸಬೇಕು. ಮನೆಯಿಂದ ಹೊರಗೆ ಹೋಗುವಾಗ ಮನೆಯ ಸುರಕ್ಷತೆಯಿಂದ ಕಾಪಾಡಬೇಕು. ಅಪರಾಧ ಆದಾಗ ಪೊಲೀಸರನ್ನು ಕೂಡಲೇ ಸಂಪರ್ಕಿಸಬೇಕು. ನಾವು ಸದಾ ನಿಮ್ಮ ಸೇವೆಯಲ್ಲಿ ಇರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರೊಬೆಷನರಿ ಎಸ್.ಐ ಶಶಿಧರ್, ಎ.ಎಸ್.ಐ ಶ್ರೀಧರ್ ಕೆ.ಜೆ, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಫಾರೂಕ್ ಚಂದ್ರನಗರ, ಸಂಚಾಲಕ ದಿವಾಕರ ಡಿ ಶೆಟ್ಟಿ, ಬಟರ್ ಫ್ಲೈ ಆಡಳಿತ ನಿರ್ದೇಶಕ ಹಾಜಿ ಕೆ.ಉಮ್ಮರಬ್ಬ ಚಂದ್ರನಗರ ಪೊಲೀಸ್ ಸಿಬ್ಬಂದಿಗಳಾದ ಪ್ರಸಾದ್, ಬೀಟ್ ಪೊಲೀಸ್ ಅನ್ವರ್ ಹಾಗೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.