ಸಹಕಾರ ಸಂಘಗಳ ನೌಕರರ ಕ್ರೀಡಾಕೂಟ ಪೂರ್ವಾಭಾವಿ ಸಭೆ

ಉಡುಪಿ: ಜಿಲ್ಲೆಯ ಸಹಕಾರ ಸಂಘಗಳ ನೌಕರರಿಗೆ ಫೆಬ್ರವರಿ ತಿಂಗಳ‌ ಮೊದಲ‌ ವಾರದಲ್ಲಿ ಸಹಕಾರಿ ಕ್ರೀಡಾಕೂಟವನ್ನು ಆಯೋಜಿಸಲು ನಿರ್ದರಿಸಲಾಗಿದ್ದು ಈ ಕುರಿತು ಪೂರ್ವಭಾವಿ ಸಭೆಯನ್ನು‌‌ ಜ.18 ರಂದು ಹೋಟೆಲ್‌ ಡಯಾನ‌ ಸಭಾಂಗಣದಲ್ಲಿ ನಡೆಸಲಾಯಿತು.

ಉಡುಪಿ‌ ಜಿಲ್ಲಾ‌ ಸಹಕಾರಿ‌‌ ಯೂನಿಯನ್ ಅಧ್ಯಕ್ಷ ಬಿ.ಜಯಕರ‌ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ‌ ಸಹಕಾರಿ ಯೂನಿಯನ್ ನಿರ್ದೇಶಕ ಮಂಡಳಿ ಸದಸ್ಯ ಹಾಗೂ ‌ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್ ಉಪಸ್ಥಿತರಿದ್ದರು.

ಈ‌ ಸಂದರ್ಭದಲ್ಲಿ ಸಹಕಾರ ರತ್ನ‌ ಪ್ರಶಸ್ತಿ ಪುರಸ್ಕೃತರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಯಶಪಾಲ್‌‌ ಸುವರ್ಣ ‌ಇವರನ್ನು ಅಡಳಿತ‌‌ ಮಂಡಳಿಯ ವತಿಯಿಂದ‌ ಅಭಿನಂದಿಸಲಾಯಿತು.

ವಿವಿಧ ಸಹಕಾರಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.