ಶ್ರೀ ಚಿಕ್ಕಮ್ಮ ಯುವ ಸಂಘಟನೆ ಬಾರಾಳಿ :ಉದ್ಘಾಟನೆ ಸಮಾರಂಭ

ಶ್ರೀ ಚಿಕ್ಕಮ್ಮ ಯುವ ಸಂಘಟನೆ ಬಾರಾಳಿ ಇದರ  ಉದ್ಘಾಟನೆ ದಿನಾಂಕ 14.01.2019 ರಂದು ಚಿಕ್ಕಮ್ಮ ದೇವಿ ದೇವಸ್ಥಾನದಲ್ಲಿ  ನಡೆಯಿತು. ಕಾರ್ಯಕ್ರಮ ಉದ್ಘಾಟನೆ ವಿಠ್ಠಲ್  ಶೆಟ್ಟಿ ಶೆಡಿಕೊಡ್ಲು ನೆರವೇರಿಸಿದರು . ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರ   ಚಿಕಿತ್ಸೆಗಾಗಿ  ರೂ 30,000 ಸಹಾಯಧನವಾಗಿ ಸಂಘಟನೆ ವತಿಯಿಂದ ವಿತರಿಸಲಾಯಿತು ಹಾಗೂ ಉದ್ಘಾಟಕರಿಗೆ  ಗೌರವಾರ್ಪಣೆ ,ಬಾರಾಳಿ  ಶಾಲೆಯ ದೈಹಿಕ ಶಿಕ್ಷಕ ರಾಜಾರಾಮ್ ಮತ್ತು ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಮಣಿಕಂಠ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂದಾರ್ತಿ  ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಶೆಟ್ಟಿ ,ಹೆಗ್ಗುಂಜೆ ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ಕುಮಾರ್ ಶೆಟ್ಟಿ, ಮಂದಾರ್ತಿ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಗಂಗಾಧರ್ ಶೆಟ್ಟಿ , ರಾಜಾರಾಮ್, ಬಿ ಜಯರಾಮ್ ರೈ,ಶಾಂತಾರಾಮ್ ಶೆಟ್ಟಿ ,  ಲಕ್ಷ್ಮಿ ಹಾಗೂ ಸಂಘಟನೆಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ,ಕಾರ್ಯದರ್ಶಿ ವಿಜಯ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ನಂತರ ಚಿಕ್ಕಮ್ಮ ದೇವರ ಸನ್ನಿಧಿಯಲ್ಲಿ ದರ್ಶನ ,ಮಹಾಪೂಜೆ, ಗೆಂಡಸೇವೆ ,ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.