ಮಾ.11: ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಿಸ್ತರಿತ ಕಟ್ಟಡ “ಸಮೃದ್ಧಿ ಸಹಕಾರಿ ಸೌಧ” ಉದ್ಘಾಟನೆ

ಕಾರ್ಕಳ: ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಿಸ್ತರಣಾ ನವೀಕರಣ ಕಟ್ಟಡ ಸಮೃದ್ಧಿ ಸಹಕಾರಿ ಸೌಧ ಮಾ.11ರಂದು ಉದ್ಘಾಟನೆಗೊಳ್ಳಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾನಾಪಾಟೇಕರ್ ಸಭಾಭವನದಲ್ಲಿ ಅಂದು ಬೆಳಿಗ್ಗೆ 10. 30 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಚಿವ ವಿ. ಸುನೀಲ್ ಕುಮಾರ್ ಸಮೃದ್ಧಿ ಸಹಕಾರಿ ಸೌಧ ಉದ್ಘಾಟಿಸಲಿರುವರು. ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ […]
Udupi:ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://g.co/kgs/dW2VsH https://instagram.com/ange_lsfitness?igshid=MzRlODBiNWFlZA==
ಸಾವನ್ನು ಗೆದ್ದು ಬಂದ ಪಾಂಡುರಂಗ ಶೆಟ್ಟರು

ನಡೂರು ನಡುಮನೆ ದೊಡ್ಡ ಮನೆತನವಾದರೂ ಪಾಂಡುರಂಗ ಶೆಟ್ಟಿಯವರು ಶಾಲೆಗೆ ಸೇರುವ ಹೊತ್ತಿಗೆ ಬಡತನ ಪ್ರವೇಶ ಆಗಿತ್ತು. ಅನ್ನ ಮತ್ತು ವಸ್ತ್ರಕ್ಕೆ ತತ್ವಾರ ಬಂದೊದಗಿತ್ತು. ಆರನೇ ಕ್ಲಾಸು ಪಾಸ್ ಮಾಡಲಾರದೆ ಧಾರವಾಡಕ್ಕೆ ಬಸ್ಸು ಹತ್ತಿದರು. ಅಲ್ಲಿ ಮಾವ ಹೋಟೇಲು ನಡೆಸುತ್ತಿದ್ದರು. ಏಳು ವರ್ಷ ಮಾವನ ಹೋಟೇಲಿನಲ್ಲಿ ಕೆಲಸ ಮಾಡಿದರು. ಬಳಿಕ ಅಲ್ಲಿಂದ ಹೊರ ಬಂದು ಸಣ್ಣದೊಂದು ಹೋಟೇಲು ಶುರು ಮಾಡಿದರು. ಮತ್ತೆ ಊರಿನತ್ತ ಹಿಂತಿರುಗುವಾಗ ವರ್ಷ 32 ಆಗಿತ್ತು. ಮದುವೆ ಆಯಿತು, ಊರಲ್ಲಿ ಒಂದು ಅಂಗಡಿ ತೆರೆದರು. ಗೆಳೆಯರು, […]
ನಾಳೆ ಅಂಬಲಪಾಡಿಯಲ್ಲಿ ಉಡುಪಿಯ ಅತಿ ದೊಡ್ಡ ಶೋರೂಂ ‘ಮಾರುತಿ ಟೈಲ್ಸ್’ ಉದ್ಘಾಟನೆ

ಉಡುಪಿ: ಉಡುಪಿ ಅಂಬಲಪಾಡಿಯ ಕನ್ನರ್ಪಾಡಿ ಸರ್ವಿಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಫೆ.17 ರಂದು ಸಂಜೆ 4 ಗಂಟೆಗೆ ಉಡುಪಿಯಲ್ಲಿಯೆ ಅತಿ ದೊಡ್ಡ ಶೋರೂಂ ಮಾರುತಿ ಟೈಲ್ಸ್ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳುಯಾಗಿ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಅಧ್ಯಕ್ಷರು, ಬಿಲ್ಡರ್ಸ್ ಅಸೋಸಿಯೇಷನ್, ಕ್ರೆಡೈ, ಉಡುಪಿ, ಸುಧೀರ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಕೀರ್ತಿ ಕನ್ಸ್ಟ್ರಕ್ಷನ್ ಉಡುಪಿ, ಯೋಗೀಶ್ಚಂದ್ರಧರ್ (ವಾಸ್ತುಶಿಲ್ಪಿ) ಕಾರ್ಯದರ್ಶಿ, ಎಸಿಸಿಇಎ ಉಡುಪಿ, ಎಂ.ಡಿ.ಗಣೇಶ್ (ಸಿವಿಲ್ ಇಂಜಿನಿಯರ್) ಉಪಾಧ್ಯಕ್ಷರು, ಎಸಿಸಿಇಎ ಉಡುಪಿ, ವಿ ಗುರುಪ್ರಸಾದ್ ಭಟ್ ಅಧ್ಯಕ್ಷರು, ವಿದ್ಯುತ್ […]
ಕರಾವಳಿ ಯೂತ್ ಕ್ಲಬ್ ತಂಡದಿಂದ ಫೆ.14ರ ದಿನವನ್ನು ದೇಶ ಪ್ರೇಮಿಗಳ ದಿನಾಚರಣೆಯನ್ನಾಗಿ ವಿಶೇಷವಾಗಿ ಆಚರಣೆ

ಉಡುಪಿ: ಕರಾವಳಿ ಯೂತ್ ಕ್ಲಬ್ ತಂಡದಿಂದ ಫೆಬ್ರವರಿ 14ರ ದಿನವನ್ನು ದೇಶ ಪ್ರೇಮಿಗಳ ದಿನಾಚರಣೆಯನ್ನಾಗಿ ವಿಶೇಷವಾಗಿ ಆಚರಿಸಲಾಯಿತು. ಉಡುಪಿಯ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಫುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರ ಹುತಾತ್ಮ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಹಾಗೂ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ನಿವೃತ್ತ ಸೈನಿಕರಾದ ಸಂಜಯ್ ಗುಡುಪ್ಕರ್ ಮತ್ತು ಪ್ರಕಾಶ್ ಇಂಗಲ್ಗೆ ಇವರಿಗೆ ಹೂಗುಚ್ಛ ನೀಡಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ಯೂತ್ ಕ್ಲಬ್ ನ ಸದಸ್ಯರು ಉಪಸಿದ್ಧರಿದ್ದರು.