ಬದಲಾಗುತ್ತಿದೆ ಕಾಲ: ಮಾಧ್ಯಮದಲ್ಲಿ ಹೊಸ ಕ್ರಾಂತಿಗೆ ಇದು ಸಕಾಲ: ಕುದ್ಯಾಡಿ ಸಂದೇಶ್ ಸಾಲ್ಯಾನ್ ಬರಹ

ಪತ್ರಿಕೆಗೆ ಕಳುಹಿಸಿದ ವರದಿಯೊಂದು ಪ್ರಕಟವಾಗಿದೆಯೇ ಎಂದು ಆ ಪತ್ರಿಕೆಯ ವರದಿಗಾರರನ್ನು ಕೇಳಿದರೆ ಅವರಿಗೆ ಸಂತೋಷವೇನೂ ಆಗಲಿಕ್ಕಿಲ್ಲ. “ಬಂದಿರಬಹುದು, ನೋಡಿ” ಎನ್ನಬಹುದು ಅವರು. ಏಕೆಂದರೆ ತಮ್ಮ ಪತ್ರಿಕೆಯನ್ನು ಎಲ್ಲರೂ ಖರೀದಿಸಿ ಓದುತ್ತಾರೆ ಅಥವಾ ಓದಲಿ ಎಂಬ ನಿರೀಕ್ಷೆಯಲ್ಲಿ ಅವರಿರುತ್ತಾರೆ. ಬೇಕಾದರೆ ಕೊಂಡುಕೊಂಡು ಓದಲಿ ಎನ್ನುವುದು ಪತ್ರಿಕಾ ಕಚೇರಿಯ ಧೋರಣೆ. ಏಕೆಂದರೆ ಪತ್ರಿಕೆ ಇರುವುದು ಖರೀದಿಸಿ ಓದುವುದಕ್ಕಾಗಿಯೇ! ಉತ್ಪಾದನಾ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ದರಕ್ಕೆ ಸಿಗುವ ಉತ್ಪನ್ನವೊಂದಿದ್ದರೆ ಅದು ಪತ್ರಿಕೆ. ಬಂದಿರಬಹುದು ನೋಡಿ ಎಂದರೆ ಖರೀದಿಸಿ ನೋಡಿ ಎಂದರ್ಥ. […]
ಉಡುಪಿಯ ಆತ್ರಾಡಿಯಲ್ಲಿ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ.

ಉಡುಪಿ: ಕರಾವಳಿಯ ಜನಪ್ರಿಯ ಸಂಸ್ಥೆಯಾದ ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಅದ್ದೂರಿಯಿಂದ ನಡೆಯಿತು. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಇಚ್ಚಾಶಕ್ತಿ ಗಟ್ಟಿಯಾಗಿದ್ದರೆ ಸಾಧನೆ ಮಾಡುವ ಬದ್ದತೆಯಿದ್ದರೆ ದೊಡ್ಡ ಸಾಧಕರಾಗಬಹುದು, ಉದ್ಯೋಗದಾತರಾಗಬಹುದು ಎನ್ನುವುದಕ್ಕೆ ಶಾಂಭವಿ ಸಂಸ್ಥೆ ಕಟ್ಟಿ […]
ಮಣಿಪಾಲದ MSDC ಯಲ್ಲಿ ಫೆ. 15 ರಂದು ಸೀರೆಗಳಿಗೆ ಕುಚ್ಚು ಹಾಕುವ ಕಾರ್ಯಾಗಾರ: ಸ್ವ ಉದ್ಯೋಗ ಮಾಡಲು ನೆರವಾಗುತ್ತೆ ಈ ಕಾರ್ಯಾಗಾರ

ಮಣಿಪಾಲ: ಮಣಿಪಾಲದಲ್ಲಿರುವ ಸ್ಕೂಲ್ ಆಫ್ ಫ್ಯಾಶನ್ ಆಂಡ್ ಇಂಟೀರಿಯರ್ ಡಿಸೈನಿಂಗ್ MSDC ಯಲ್ಲಿ ಸೀರೆಗಳಿಗೆ ಕುಚ್ಚು ಹಾಕುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಫ್ಯಾಶನ್ ಲೋಕ ಅತ್ಯಂತ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರ ಇದಾಗಿದೆ. ಕಾರ್ಯಾಗಾರ ಶುಲ್ಕ ರೂ.299 ಆಗಿದ್ದು ಫೆ. 15 ರಂದು ಬೆಳಿಗ್ಗೆ 10 ರಿಂದ 12.30 ರ ವರೆಗೆಕಾರ್ಯಾಗಾರ ನಡೆಯಲಿದೆ. ಸೀರೆಗೆ ಕುಚ್ಚು ಹಾಕುವಲ್ಲಿ ನಲ್ಲಿ ನೀವು ಪರಿಣಿತರಾಗಲು ಇಲ್ಲಿ ಅದ್ಬುತ ಅವಕಾಶ ನೀಡಲಾಗಿದೆ. ಹಾಗಾದ್ರೆ ತಡ ಮಾಡ್ಬೇಡಿ. ಈ ಕೋರ್ಸ್ ಗೆ ಸೇರಲು ಕೂಡಲೇ […]
ವಾರ ಭವಿಷ್ಯ: ಯಾರಿಗೆ ಶುಭ ? ಯಾರಿಗೆ ಅಶುಭ ?

ಜ್ಯೋತಿಷಿ ಪಂಡಿತ್ ಕೆ.ಎಸ್.ಮೂರ್ತಿ ಸಂಪರ್ಕ ಸಂಖ್ಯೆ : 8891098995 ಮೇಷ (Aries )ಪ್ರಮುಖ ಸೂಚನೆ:ಫೆಬ್ರವರಿ 3ರಿಂದ, ಶುಭರಾಶಿ (Venus) ನಿಮ್ಮ ರಾಶಿಯಲ್ಲಿ ಪ್ರವೇಶಿಸಿ ನಿಮ್ಮ ಸ್ವಾಭಿಮಾನ ಹಾಗೂ ಪ್ರೀತಿಯಲ್ಲಿ ನವಚೈತನ್ಯ ತರಲು ಸಹಾಯಕವಾಗುತ್ತದೆ.ಹೊಸ ಯೋಜನೆಗಳನ್ನು ಕೈಗೊಳ್ಳುವ ಮೂಲಕ ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಸಿಗಬಹುದು.ಕುಟುಂಬದ ಸಭೆಗಳಿಂದ ಹಳೆಯ ಸಂಬಂಧಗಳನ್ನು ಪುನರಜೀವನಗೊಳಿಸುವ ಅವಕಾಶ ಸಿಕ್ಕಿರಬಹುದು. ವೃಷಭ (Taurus )ಪ್ರಮುಖ ಸೂಚನೆ:ಪ್ರೇಮ ಗ್ರಹ (Venus) ಫೆಬ್ರವರಿ 3ರಂದು ನಿಮ್ಮ ಮೇಲೆ ದಯಾನಿಧಾನವನ್ನು ತರುತ್ತದೆ; ಹಳೆಯ ಭಾವನೆಗಳು ಹೊರಹೊಮ್ಮಿ ಹೊಸ […]
ಜ.31ರಂದು ಕುತ್ಪಾಡಿ ಎಸ್ ಡಿಎಂ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

ಉಡುಪಿ: ಉಡುಪಿ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಸಂಶೋಧನ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಜ. 31ರಂದು ಬೆಳಿಗ್ಗೆ 11ಗಂಟೆಗೆ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಮಮತಾ ಕೆ.ವಿ. ತಿಳಿಸಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರತೀರ್ಥ ಶ್ರೀಪಾದರು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ದೀಪ ಪ್ರಜ್ವಲಿಸಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ […]