ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಕಟ್ಟಡ ‘ಕದಿರು’ ಉದ್ಘಾಟನೆ

ಸಿದ್ದಾಪುರ: ಶತಮಾನೋತ್ಸವ ಸಂಭ್ರಮಾಚರಣೆಯ ಸಮೀಪದಲ್ಲಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ವಂತ ಬಂಡವಾಳದಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ‘ಕದಿರು’ ಜೂ. 26ರಂದು ಉದ್ಘಾಟನೆ ಗೊಂಡಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡ ಹಾಗೂ ಆಡಳಿತ ಮಂಡಳಿಯ ಸಭಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು. ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕಿಂಗ್ ವಿಭಾಗ ಮತ್ತು ಸಭಾ ಭವನ […]
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಜೂ.26: ನೂತನ ಕಟ್ಟಡ ‘ಕದಿರು’ ಉದ್ಘಾಟನೆ

ಸಿದ್ದಾಪುರ: ಶತಮಾನೋತ್ಸವ ಸಂಭ್ರಮಾಚರಣೆಯ ಸಮೀಪದಲ್ಲಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ಸ್ವಂತ ಬಂಡವಾಳದಿಂದ ಸುಮಾರು 2 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಕದಿರು ಜೂ.26ರ ಬುಧವಾರ ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎ. ಜಯರಾಮ ಭಂಡಾರಿ ಅವರು ಹೇಳಿದರು. ಅವರು ಸಿದ್ದಾಪುರದಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಜೂ.23ರಂದು ನಡೆಸಿದಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 26ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. […]
ಉಡುಪಿ ಪ್ರೈಮ್ ಸಂಸ್ಥೆಯಿಂದ ಬ್ಯಾಂಕಿಂಗ್ ನೇಮಕಾತಿ ಹುದ್ದೆಗೆ ದೈನಂದಿನ ತರಬೇತಿ

ಉಡುಪಿ: ಉಡುಪಿಯ ಪ್ರೈಮ್ ಸಂಸ್ಥೆಯು ಮುಂದೆ ಪ್ರಕಟಗೊಳ್ಳಲಿರುವ ಐಬಿಪಿಎಸ್, ಕರ್ಣಾಟಕ ಬ್ಯಾಂಕ್ ಕ್ಲರಿಕಲ್/ ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರ ನೇತೃತ್ವದಲ್ಲಿ ಜೂ. 29ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಬ್ರಹ್ಮಗಿರಿ ಬಳಿಯ ಪ್ರೈಮ್ ಕೇಂದ್ರದಲ್ಲಿ ಆರಂಭಿಸಲಿದೆ. ಪ್ರತೀ ಸೋಮವಾರದಿಂದ ಶನಿವಾರ ಸಂಜೆ 5ರಿಂದ 6.30ರ ವರೆಗೆ, ಪ್ರತೀ ಭಾನುವಾರ ಮಧ್ಯಾಹ್ನ 3.30ರಿಂದ 6.30ರ ವರೆಗೆ ನಡೆಯಲಿರುವ 200 ಗಂಟೆಗಳ ಈ ತರಬೇತಿ ಬ್ಯಾಂಕಿಂಗ್ ಪರೀಕ್ಷೆಯ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್, ಮ್ಯಾಥ್ಸ್, ಇಂಗ್ಲಿಷ್, ಮೈನ್ಸ್ […]
ಉಡುಪಿ ಆಚಾರ್ಯ ಏಸ್: ಜೂ.22ರಿಂದ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ಆರಂಭ

ಉಡುಪಿ: 9ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿ.ಯು.ಸಿ., ಸಿ.ಇ.ಟಿ., ನೀಟ್, ಜೆ.ಇ.ಇ. ಮೇನ್ಸ್ , ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್ ಏಸ್ ಸಂಸ್ಥೆಯು ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಗರಿಷ್ಠ ಫಲಿತಾಂಶಕ್ಕಾಗಿ ನೂತನ ರೀತಿಯ ತರಬೇತಿಯನ್ನು ಹಮ್ಮಿಕೊಂಡಿದೆ. ಐಬಿಪಿಎಸ್ ಹಾಗೂ ಇತರೇ ಬ್ಯಾಂಕ್ಗಳು ಅಯೋಜಿಸಲಿರುವ ಎಸ್ಬಿಐ ಪಿ.ಒ. ಮತ್ತು ಕ್ಲರ್ಕ್ ಹುದ್ದೆಗಳಿಗಾಗಿ ಪರೀಕ್ಷೆಗಳು ಜರಗಲಿರುವುದರಿಂದ ಸಂಜೆಯ ಮತ್ತು ವಾರಾಂತ್ಯದ ತರಗತಿಗಳು ಜೂ. 22ರಿಂದ ಆರಂಭ ವಾಗಲಿದೆ. ವಾರಾಂತ್ಯದ ತರಗತಿಗಳು ಶನಿವಾರ […]
ಜೂ.30 ;ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್

ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಯುವ ಜನತೆಯ ಪ್ರತಿಭೆಗೊಂದು ಸುವರ್ಣಾವಕಾಶ.ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್ ಸೀಸನ್ 1 ಕಾರ್ಯಕ್ರಮ ತಾ. 30ರ ಜೂನ್ ತಿಂಗಳಿನಲ್ಲಿ ಫೋರಮ್ ಫೀಝ ಮಾಲ್ನಲ್ಲಿ ನಡೆಯಲಿದೆ . ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆರ್ಟಿಸ್ಟ್,ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ . ನಿಮ್ಮ ಪ್ರತಿಭೆಗೆ ಇದು ಸೂಕ್ತ ವೇದಿಕೆ : ಯುವ ಜನತೆಯಲ್ಲಿ ವಿಶೇಷ ಪ್ರತಿಭೆ ಗುರುತಿಸುವುದು ಮತ್ತು ಅವರಿಗೊಂದು ಸೂಕ್ತ ವೇದಿಕೆ ಕಲ್ಪಿಸುವ ಹಾಗು ಯುವಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ . ಬರೀ ಕರಾವಳಿ ಜನತೆ ಮಾತ್ರವಲ್ಲ, […]