ಮೂರನೇ ಸವಾರನೂ ವಿಮೆಗೆ ಅರ್ಹ: ಹೈಕೋರ್ಟ್
ಬೆಂಗಳೂರು: ದ್ವಿಚಕ್ರ ವಾಹನದ ವಿಮೆಗೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೈಕ್ ಅಪಘಾತ ಸಂದರ್ಭದಲ್ಲಿ ಮೂವರು ಸವಾರಿ ಮಾಡುತ್ತಿದ್ದರೆ, ಮೂರನೇ ಸವಾರನಿಗೂ ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಹೈಕೋರ್ಟ್ ಆದೇಶಿಸಿದೆ. 2011ರಲ್ಲಿ ಕಲಬುರ್ಗಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಈ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಮೂರನೇ ಸವಾರರಿಗೂ ವಿಮೆ ನೀಡಬೇಕು ಎಂದು ಮೋಟಾರು ವಾಹನ ನ್ಯಾಯಮಂಡಳಿ 2012ರಲ್ಲಿ ನೀಡಿದ್ದ ಆದೇಶವನ್ನು ವಿಮಾ ಕಂಪನಿ ಪ್ರಶ್ನಿಸಿತ್ತು. ಮೂರನೇ ಸವಾರನ ಕುಟುಂಬಕ್ಕೆ ₹8.10 ಲಕ್ಷ ಪರಿಹಾರ […]
ಶಿರ್ವ: ಬಿಜೆಪಿ ಬೂತ್ ಅಧ್ಯಕ್ಷರ ನಾಮಫಲಕ ಹಸ್ತಾಂತರ ಸಮಾವೇಶ
ಶಿರ್ವ: ಶಿರ್ವ ಮಹಾಶಕ್ತಿಕೇಂದ್ರದ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶ ಕಳತ್ತೂರು ಗುರ್ಮೆ ಸುರೇಶ್ ಶೆಟ್ಟಿ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಮಹಾಶಕ್ತಿಕೇಂದ್ರದ ಎಲ್ಲಾ ಬೂತ್ ಅಧ್ಯಕ್ಷರುಗಳಿಗೆ ನಾಮಫಲಕ ನೀಡಲಾಯಿತು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬೂತ್ ಅಧ್ಯಕ್ಷರ ಜವಾಬ್ದಾರಿ ಮತ್ತು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು. ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ಮಾತನಾಡಿ, ಬೂತ್ ಅಧ್ಯಕ್ಷರ ಜವಾಬ್ದಾರಿ ಹಾಗೂ ಪಕ್ಷದ ಚಟುವಟಿಕೆಗಳನ್ನು ನಿರ್ವಹಿಸುವ ಬಗ್ಗೆ ಮಾಹಿತಿ […]
ಅತಿ ಕಡಿಮೆ ಬೆಲೆಯ ‘ಜಿಯೊಫೋನ್ ನೆಕ್ಸ್ಟ್’ ಸ್ಮಾರ್ಟ್ಫೋನ್ ದೀಪಾವಳಿಗೆ ಬಿಡುಗಡೆ
ನವದೆಹಲಿ: ಗೂಗಲ್ ಜೊತೆಗೂಡಿ ಜಿಯೊ ಕಂಪೆನಿ ಅತಿ ಕಡಿಮೆ ಬೆಲೆಯ ‘ಜಿಯೊಫೋನ್ ನೆಕ್ಸ್ಟ್’ ಸ್ಮಾರ್ಟ್ಫೋನ್ ಅನ್ನು ತಯಾರಿಸಿದ್ದು, ಇದನ್ನು ದೀಪಾವಳಿಗೆ ಬಿಡುಗಡೆ ಮಾಡುವುದಾಗಿ ಜಿಯೊ ಕಂಪನಿಯು ತಿಳಿಸಿದೆ. ಈ ಸ್ಮಾರ್ಟ್ಫೋನ್ ಶುಕ್ರವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂದು ಕಂಪೆನಿ ಹೇಳಿದೆ. 2ಜಿ ಯಿಂದ 4ಜಿ ಸಂಪರ್ಕಕ್ಕೆ ಅಪ್ಗ್ರೇಡ್ ಆಗಲು ಬಯಸುವವರಿಗೆ ಈ ಸ್ಮಾರ್ಟ್ಫೋನ್ ಸೂಕ್ತವಾಗಿದೆ. ಆದರೆ, ಇದರ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಕಂಪನಿ ನೀಡಿಲ್ಲ.
ಅಲೆವೂರು ಕಟ್ಟೆ ಗಣಪತಿಯ ದರ್ಶನ ಪಡೆದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಲೆವೂರು ಸಾರ್ವಜನಿಕ ಗಣೇಶೋತ್ಸವದಲ್ಲಿ ಇಂದು ಭಾಗವಹಿಸಿ ಗಣಪತಿ ದೇವರ ದರ್ಶನ ಪಡೆದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲೆವೂರು ಇದರ ವತಿಯಿಂದ ಗುಡ್ಡೆಯಂಗಡಿ ಜಂಕ್ಷನ್ ನಲ್ಲಿ ಕಳೆದ 37 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಆಗಮಿಸಿ ತನ್ನ ಊರಿನ ಅಲೆವೂರು ಕಟ್ಟೆ ಗಣಪತಿಯ ದರ್ಶನ ಪಡೆದರು. ರಕ್ಷಿತ್ ಶೆಟ್ಟಿಗೆ ತಂದೆ- ತಾಯಿ, ಅಣ್ಣ ಅತ್ತಿಗೆ ಮತ್ತು ಅವರ ಮಕ್ಕಳು ಸಾಥ್ ನೀಡಿದರು. ಇದೇ ವೇಳೆ […]
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಮುಂದುವರಿದ ಸಾಮಾಜಿಕ ಕಾರ್ಯ
ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಡಿಯಲ್ಲಿ ಬರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಹೆಣ್ಣು ಮಕ್ಕಳ ಮದುವೆಗೆ ಚಿನ್ನ ಕೊಡುವ ಗೋಲ್ಡನ್ ಹಾರ್ಟ್ ಯೋಜನೆಯಲ್ಲಿ ಕಾರ್ಕಳದ ಎಣ್ಣೆಹೊಳೆಯ 100 ನೇ ಫಲಾನುಭವಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುನೀಲ್ ಕುಮಾರ್ ರವರು ಬಂಗಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಉಡುಪಿ ಜಿಲ್ಲೆಯಲ್ಲಿ ಹೌಸಿಂಗ್ ಚಾರಿಟಿಯ ಮೂಲಕ ಮನೆ ಕಟ್ಟಲು 55 ಕುಟುಂಬಗಳಿಗೆ 49 ಲಕ್ಷ , 595 […]