ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಮುಂದುವರಿದ ಸಾಮಾಜಿಕ ಕಾರ್ಯ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಡಿಯಲ್ಲಿ ಬರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಹೆಣ್ಣು ಮಕ್ಕಳ ಮದುವೆಗೆ ಚಿನ್ನ ಕೊಡುವ ಗೋಲ್ಡನ್ ಹಾರ್ಟ್ ಯೋಜನೆಯಲ್ಲಿ ಕಾರ್ಕಳದ ಎಣ್ಣೆಹೊಳೆಯ 100 ನೇ ಫಲಾನುಭವಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುನೀಲ್ ಕುಮಾರ್ ರವರು ಬಂಗಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್
ಉಡುಪಿ ಜಿಲ್ಲೆಯಲ್ಲಿ ಹೌಸಿಂಗ್ ಚಾರಿಟಿಯ ಮೂಲಕ ಮನೆ ಕಟ್ಟಲು 55 ಕುಟುಂಬಗಳಿಗೆ 49 ಲಕ್ಷ , 595 ವಿದ್ಯಾರ್ಥಿನಿಯರಿಗೆ ಮಹಿಳಾ ಸಬಲೀಕರಣದ ಅಡಿಯಲ್ಲಿ 14 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ. 665 ರೋಗಿಗಳಿಗೆ ಪ್ರತಿ ತಿಂಗಳು ಔಷಧಿ ನೀಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ 8000 ಕ್ಕಿಂತಲೂ ಅಧಿಕ ಅರ್ಹರಿಗೆ ಕಿಟ್ ಹಸ್ತಾಂತರಿಸಲಾಗಿದೆ. ವಿಶ್ವ ಪರಿಸರದ ಅಂಗವಾಗಿ 10,000 ಕ್ಕಿಂತಲೂ ಅಧಿಕ ಗಿಡಗಳನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಆರ್.ಎಂ ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ ಉಪಸ್ಥಿತರಿದ್ದರು.