4 ಗಂಟೆಗಳ ಪರಿಶ್ರಮದಿಂದ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಗುಂಡು ಸೂಜಿ ಹೊರ ತೆಗೆದ ವೈದ್ಯರು ಬದುಕುಳಿದ ಬಡ ಜೀವ!!

ರೋಹ್ಟಕ್, ಹರಿಯಾಣ: ವೈದ್ಯೋ ನಾರಾಯಣ ಹರಿ ಎಂದು ಹೇಳಲಾಗುತ್ತದೆ. ಈ ಮಾತನ್ನು ಹರಿಯಾಣದ ರೋಹ್ಟಕ್ ಜಿಲ್ಲೆಯ ಪಿಜಿಐಎಂಎಸ್ ವೈದ್ಯರು ಸಾಬೀತುಪಡಿಸಿದ್ದಾರೆ.ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ 2 ಇಂಚಿನ ಗುಂಡು ಸೂಜಿಯನ್ನು ಹೊರತೆಗೆದು ವ್ಯಕ್ತಿಯ ಜೀವ ಉಳಿಸಿರುವ ಘಟನೆಯೊಂದು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ PGIMS ರೋಹ್ಟಕ್ನ ವೈದ್ಯರ ತಂಡವು ಬಾರಾ ಬಜಾರ್ ಪ್ರದೇಶದ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಿದ್ದಾರೆ. ಸತತ 4 ಗಂಟೆಗಳ ಪರಿಶ್ರಮದ ಬಳಿಕ ವ್ಯಕ್ತಿಯ ಶ್ವಾಸಕೋಶದಲ್ಲಿ ಕಂಡು ಬಂದ ಗುಂಡು ಸೂಜಿಯನ್ನು ವೈದ್ಯರು ಹೊರತೆಗೆದು ವ್ಯಕ್ತಿಯ ಪ್ರಾಣ […]
ಹೊಸ ಮ್ಯೂಚುವಲ್ ಫಂಡ್ ಕಂಪನಿ ಆರಂಭಿಸಿದ ಅಂಬಾನಿ : ಜಿಯೋ ಬ್ಲ್ಯಾಕ್ರಾಕ್

ಮುಂಬೈ: ಭಾರತದಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ತಂತ್ರಜ್ಞಾನ ಆಧರಿತ ಕೈಗೆಟುಕುವ, ನವೀನ ಹೂಡಿಕೆ ವಿಧಾನಗಳನ್ನು ಜಿಯೋ ಬ್ಲ್ಯಾಕ್ರಾಕ್ ನೀಡಲಿದೆ ಎಂದು ಬ್ಲ್ಯಾಕ್ರಾಕ್ ಮತ್ತು ಜಿಯೋ ಫೈನಾನ್ಷಿಯಲ್ನ ಜಂಟಿ ಉದ್ಯಮವಾಗಿರುವ ಜಿಯೋ ಬ್ಲ್ಯಾಕ್ರಾಕ್ನ ಹೇಳಿಕೆ ತಿಳಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನಿಂದ ವಿಭಜನೆಗೊಂಡ, ಹಣಕಾಸು ಸಾಲ ನೀಡುವ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜಮೆಂಟ್ ಕಂಪನಿ ಬ್ಲ್ಯಾಕ್ರಾಕ್ ಎರಡೂ ಒಟ್ಟಾಗಿ ಸೇರಿ 300 ಮಿಲಿಯನ್ ಡಾಲರ್ ಸಂಯೋಜಿತ ಹೂಡಿಕೆಯೊಂದಿಗೆ ಹೊಸ ಅಸೆಟ್ ಮ್ಯಾನೇಜಮೆಂಟ್ ಕಂಪನಿ ಅಥವಾ […]
ಜನಪ್ರಿಯ ಮಾಧ್ಯಮ ಟ್ವಿಟರ್ ಲೋಗೋ ಬದಲಾವಣೆ

ಲಂಡನ್: ಜಗತ್ತಿನ ನಂಬರ್ 1 ಧನಿಕ ಎಲಾನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ಲೋಗೊ ಮತ್ತು ಹೆಸರನ್ನು ಬದಲಿಸಿಕೊಂಡಿದೆ. ನೀಲಿ ಹಕ್ಕಿ ಜಾಗದಲ್ಲೀಗ ಕಪ್ಪು ಬಿಳಿಯ X ಎಂಬ ವಿನ್ಯಾಸ ಕಾಣಿಸಿಕೊಂಡಿದೆ. ಜನಪ್ರಿಯ ಮಾಧ್ಯಮ ಟ್ವಿಟರ್ ಲೋಗೋ ಬದಲಾಗಿದೆ. ಮಾಲೀಕ ಎಲಾನ್ ಮಸ್ಕ್ ಹೊಸ ಲೋಗೋವನ್ನು ಅನಾವಣ ಮಾಡಿದರು. ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿನ ಟ್ವಿಟರ್ನ ಕೇಂದ್ರ ಕಚೇರಿಯಲ್ಲಿ ಮಾಲೀಕ ಎಲಾನ್ ಮಸ್ಕ್ X ಹೊಸ ಲೋಗೋವನ್ನು ಸೋಮವಾರ ಬಿಡುಗಡೆ ಮಾಡಿದರು. ಇದು ಸದ್ಯ ಕಂಪ್ಯೂಟರ್ಗಳ […]
ಹಾವೇರಿಯಲ್ಲೊಂದು ಆಸ್ಟ್ರೋ ಫಾರ್ಮ್ ನಿರ್ಮಿಸಿದ ರೈತನ ಮಗ ನಿರಂಜನ್
ಹಾವೇರಿ: ಖಗೋಳ ವಿದ್ಯಮಾನಗಳು ಬಡವರ್ಗದ ಜನಸಾಮಾನ್ಯರಿಗೆ ಇಂದಿಗೂ ಕಬ್ಬಿಣದ ಕಡಲೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಈ ವಿದ್ಯಮಾನಗಳನ್ನ ತಿಳಿಸುವ ಸೂಕ್ತ ತಾರಾಲಯವಿಲ್ಲ. ಅಲ್ಲದೇ ಖಗೋಳ ವಿದ್ಯಾಮಾನ ವೀಕ್ಷಣೆಗೆ ಟೆಲಿಸ್ಕೋಪ್ ಸೇರಿದಂತೆ ವಿವಿಧ ಉಪಕರಣಗಳ ಕೈಗೆಟುಕುವ ಬೆಲೆಯಲ್ಲಿಲ್ಲ. ಮಿಲ್ಕಿವೇ, ಗ್ಯಾಲಕ್ಸಿ, ನಕ್ಷತ್ರ, ಕ್ಷುದ್ರಗೃಹ, ಧೂಮಕೇತು, ಸೌರವ್ಯೂಹ ಅಷ್ಟೇ ಯಾಕೆ ಎಷ್ಟೋ ಜನರು ಇನ್ನು ಭೂಮಿಯ ನೈಸರ್ಗಿಕ ಉಪಗೃಹ ಚಂದ್ರನ ಸರಿಯಾಗಿ ವೀಕ್ಷಣೆ ಮಾಡಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ನಿರ್ಮಿಸಲಾಗಿರುವ ತಾರಾಲಯಗಳಲ್ಲಿ ಶ್ರೀಮಂತರು, ನಗರವಾಸಿಗಳು ತಮ್ಮ ಖಗೋಳಕೌತುಕ ಕಳೆದುಕೊಳ್ಳುತ್ತಾರೆ.ಅನ್ಯಗ್ರಹ, […]
ಇಸ್ರೋದಿಂದ ಪ್ರಾಯೋಗಿಕ ಪರೀಕ್ಷೆ: ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವಸಹಿತ ಗಗನಯಾನ ಮಿಷನ್

ಬೆಂಗಳೂರು: ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ.ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವ ಸಹಿತ ಗಗನಯಾನ ಮಿಷನ್ನ ಬಂದರು ಪ್ರಯೋಗ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ ಗಗನಯಾನ ಯೋಜನೆಯು ಬಾಹ್ಯಾಕಾಶ ನೌಕೆಯ ಮೂಲಕ ಮೂವರು ಗಗನಯಾತ್ರಿಗಳನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ದೂರದ ಕಕ್ಷೆಗೆ ಉಡಾವಣೆ ಮಾಡಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವುದಾಗಿದೆ. ಆಂಧ್ರ ಪ್ರದೇಶದ […]