ಪಾವೊ ನೂರ್ಮಿ ಗೇಮ್ಸ್: ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ

ನವದೆಹಲಿ: ಟರ್ಕು (ಫಿನ್ಲ್ಯಾಂಡ್) ನಲ್ಲಿ ನಡೆದ 2022 ರ ಪಾವೊ ನೂರ್ಮಿ ಗೇಮ್ಸ್ನ ಪುರುಷರ ಜಾವೆಲಿನ್ ಥ್ರೋ ನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 24ರ ಹರೆಯದ ಚೋಪ್ರಾ ಮಂಗಳವಾರ (ಜೂನ್ 14) ದಂದು 89.30 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ವೈಯಕ್ತಿಕ ಮತ್ತು ರಾಷ್ಟ್ರೀಯ ದಾಖಲೆಯನ್ನು ಮಾಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ನೀರಜ್ ರ ಅತ್ಯುತ್ತಮ ಎಸೆತದ ರಾಷ್ಟ್ರೀಯ ದಾಖಲೆ 87.58 ಮೀಟರ್ ಆಗಿತ್ತು. […]
ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಗೆ ಮೊದಲ ತಾಯ್ನಾಡ ಗೌರವ: ಸ್ಪಿನ್ ಮಾಂತ್ರಿಕನಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದ ಆಸ್ಟ್ರೇಲಿಯಾ

ರಾಣಿಯ ಜನ್ಮದಿನದ ಪಟ್ಟಿಯಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಆಶ್ ಬಾರ್ಟಿ ಜೊತೆಗೆ ಆಫೀಸರ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಎಂದು ಹೆಸರಿಸಲ್ಪಟ್ಟ ನಂತರ ಶೇನ್ ವಾರ್ನ್ ತಮ್ಮ ಮೊದಲ ಆಸ್ಟ್ರೇಲಿಯಾದ ಗೌರವವನ್ನು ಮರಣೋತ್ತರವಾಗಿ ಪಡೆದರು. ಮಾರ್ಚ್ನಲ್ಲಿ ಥೈಲ್ಯಾಂಡ್ನಲ್ಲಿ ರಜಾದಿನಗಳಲ್ಲಿದ್ದಾಗ ಶಂಕಿತ ಹೃದಯಾಘಾತದಿಂದ 52 ನೇ ವಯಸ್ಸಿನಲ್ಲಿ ನಿಧನರಾದ ಸ್ಪಿನ್-ಬೌಲಿಂಗ್ ಮಾಂತ್ರಿಕನಿಗೆ ಕ್ರೀಡಾ ಜಗತ್ತೇ ಪ್ರಶಸ್ತಿಗಳ ಸುರಿಮಳೆಗೈದಿದ್ದರೂ ಅವರ ಸ್ವಂತ ದೇಶವು ಅವರನ್ನು ಔಪಚಾರಿಕವಾಗಿ ಗೌರವಿಸಿರಲಿಲ್ಲ. ಅದನ್ನೀಗ ಸರಿಪಡಿಸಲಾಗಿದ್ದು, ಭಾನುವಾರ ತಡರಾತ್ರಿ “ಒಬ್ಬ ಆಟಗಾರನಾಗಿ ಕ್ರಿಕೆಟ್ ಗೆ […]
ನಕ್ಸಲರ ದಾಳಿಗೆ ಬಲಿಯಾದ ತಂದೆ; ಖೇಲೋ ಇಂಡಿಯಾದಲ್ಲಿ ದಾಖಲೆ ನಿರ್ಮಿಸಿ ಚಿನ್ನ ಗೆದ್ದ ಮಗಳು: ಸುಪ್ರಿತಿ ಕಚ್ಚಪ್ ಗೆಲುವಿನ ಓಟ

ನವದೆಹಲಿ: ತನ್ನ ತಂದೆಯನ್ನು ಕಳೆದುಕೊಂಡಾಗ ಸುಪ್ರಿತಿ ಕಚ್ಚಪ್ ಕೇವಲ ಶಿಶುವಾಗಿದ್ದರು. ತಂದೆ ರಾಮಸೇವಕ್ ಓರಾನ್, ತಾಯಿ ಬಲ್ಮತಿ ದೇವಿ ಮತ್ತು ಅವರ ಐದು ಮಕ್ಕಳು ಝಾರ್ಖಂಡ್ ನ ಬುರ್ಹು ಗ್ರಾಮದ ನಿವಾಸಿಗಳಾಗಿದ್ದರು. ಗ್ರಾಮದ ವೈದ್ಯಕೀಯ ವೈದ್ಯರಾಗಿದ್ದ ಓರಾನ್ 2003 ಡಿಸೆಂಬರ್ ರಾತ್ರಿಯಂದು ಇತರ ನಾಲ್ಕು ಗ್ರಾಮಸ್ಥರೊಂದಿಗೆ ಹತ್ತಿರದ ಹಳ್ಳಿಯ ರೋಗಿಯ ಮನೆಗೆ ಹೋಗಿದ್ದರು. ಆದರೆ ಅವರು ತಿರುಗಿ ವಾಪಾಸು ಮನೆಗೆ ಬರಲೇ ಇಲ್ಲ. ಓರಾನ್ ಮತ್ತು ಇತರ ಗ್ರಾಮಸ್ಥರು ನಕ್ಸಲ್ ದಾಳಿಗೆ ಬಲಿಯಾಗಿ ಶವವಾಗಿ ಪತ್ತೆಯಾಗಿದ್ದರು. ಅವರ […]
ಐಪಿಎಲ್ 2022: ಮೇಲ್ವಿಚಾರಕರು ಮತ್ತು ಮೈದಾನ ಸಿಬ್ಬಂದಿಗಳಿಗೆ ರೂ 1.25 ಕೋಟಿ ಬಹುಮಾನವನ್ನು ಘೋಷಿಸಿದ ಬಿಸಿಸಿಐ

ನವದೆಹಲಿ: ಸೋಮವಾರ, ಮೇ 30 ರಂದು ಐಪಿಎಲ್ 2022 ಅನ್ನು ಆಯೋಜಿಸಿದ ಎಲ್ಲಾ 6 ಸ್ಥಳಗಳ ಮೇಲ್ವಿಚಾರಕರು ಮತ್ತು ಮೈದಾನದ ಸಿಬ್ಬಂದಿಯನ್ನು ಹೊಗಳಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ, ಅವರೆಲ್ಲಾ ಈ ಯಶಸ್ವಿ ಋತುವಿನ ‘ಅನ್ ಸಂಗ್ ಹೀರೋಗಳು’ ಎಂದು ಬಣ್ಣಿಸಿದ್ದಾರೆ. ಐಪಿಎಲ್ 2022 ಸೀಸನ್ ಅನ್ನು ಆಯೋಜಿಸಿದ ಎಲ್ಲಾ 6 ಸ್ಥಳಗಳಲ್ಲಿ ಮೇಲ್ವಿಚಾರಕರು ಮತ್ತು ಮೈದಾನದ ಸಿಬ್ಬಂದಿಗಳಿಗೆ 1.25 ಕೋಟಿ ರೂಪಾಯಿ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ, […]
ಮರಳಿ ಗೂಡು ಸೇರಲಿದೆ ಆರ್ಸಿಬಿ ಹಕ್ಕಿ: 2023 ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುತ್ತೇನೆಂದ ಎಬಿ ಡಿವಿಲಿಯರ್ಸ್!

ಬೆಂಗಳೂರು: ಮಿಸ್ಟರ್ 360 ಡಿಗ್ರಿ ಎಂದು ಪರಿಗಣಿಸಲಾಗುವ, ಕ್ರಿಕೆಟ್ ಜಗತ್ತಿನ ಬಹು ಬೇಡಿಕೆಯ ಆಟಗಾರ, ಆರ್ಸಿಬಿಯ ಹಕ್ಕಿ ಎಬಿ ಡಿವಿಲಿಯರ್ಸ್ ಮರಳಿ ಗೂಡು ಸೇರಲಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕೆಲವು ತಿಂಗಳ ನಂತರ, ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವುದಾಗಿ ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ ಮುಂದಿನ ವರ್ಷ ಐಪಿಎಲ್ಗೆ “ಖಂಡಿತವಾಗಿ” ಮರಳಲಿದ್ದೇನೆ ಎಂದು ಅವರು ಹೇಳಿದ್ದಾರೆ. “ವಿರಾಟ್ ಅದನ್ನು ಖಚಿತಪಡಿಸಿದ್ದು ಕೇಳಿ ನನಗೆ ಖುಷಿಯಾಗಿದೆ. ನಿಜ ಹೇಳಬೇಕೆಂದರೆ, […]