ತುಳುವ ಮಣ್ಣಿನ ಕಂಪು ಪಸರುವ ಕಾಂತಾರಾ ಚಿತ್ರದ ಟ್ರೈಲರ್ ಬಿಡುಗಡೆ

ಮಂಗಳೂರು/ಉಡುಪಿ: ಅವಿಭಜಿತ ದ.ಕ ಜಿಲ್ಲೆಯ ಬಹುಮುಖ ಪ್ರತಿಭೆ, ಕುಂದಾಪುರದ ಅಭಿಜಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಾಂತಾರಾ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಖುದ್ದು ರಿಷಬ್ ಶೆಟ್ಟಿ ಚಿತ್ರಕಥೆ ಬರೆದು ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ನಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ದೃಶ್ಯಗಳು ಮನೋಜ್ಞವಾಗಿ ಮೂಡಿಬಂದಿವೆ. ನಾಯಕಿಯಾಗಿ ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮತೊಬ್ಬ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತವು […]
ಆರ್ಎಸ್ಎಸ್ ಕುರಿತ ಚಲನಚಿತ್ರಕ್ಕೆ ರಾಜಮೌಳಿ ತಂದೆ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಸಾರಥ್ಯ

ಖ್ಯಾತ ನಿರ್ದೇಶಕ ಎಸ್. ರಾಜಮೌಳಿ ಅವರ ತಂದೆ, ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಅತ್ಯಂತ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರು. ಬಾಹುಬಲಿ, ಆರ್ಆರ್ಆರ್, ಮಣಿಕರ್ಣಿಕಾ, ಬಜರಂಗಿ ಭಾಯಿಜಾನ್, ಮಗಧೀರ ಮತ್ತು ಮೆರ್ಸಲ್ ಸೇರಿದಂತೆ ಅನೇಕ ಚಿತ್ರಗಳನ್ನು ಬರೆದು ಪ್ರಸಿದ್ದಿ ಪಡೆದಿರುವ ಪ್ರಸಾದ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಳೆದ ತಿಂಗಳು, ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಸಾದ್ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಕೂಡಾ ಮಾಡಿದ್ದರು. ವಿಜಯವಾಡದಲ್ಲಿ ಆರ್ಆರ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ರಾಮ್ ಮಾಧವ್ ಅವರ ಪುಸ್ತಕ ಬಿಡುಗಡೆ […]
ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟ ಸವಿದು ಸರಳತೆ ಮೆರೆದ ಖ್ಯಾತ ನಿರ್ದೇಶಕ ರಾಜಮೌಳಿ

ಚೆನ್ನೈ: ವಿಶ್ವವನ್ನೇ ಬೆರಗಾಗಿಸುವ ಸಿನಿಮಾಗಳನ್ನು ತೆರೆ ಮೇಲೆ ಮೂಡಿಸುವ ಬಹು ಬೇಡಿಕೆ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿಜ ಜೀವನದಲ್ಲಿ ತುಂಬಾ ಸರಳ ವ್ಯಕ್ತಿಯಂತೆ ಅಪ್ಪಟ ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟವನ್ನು ಸವಿದಿದ್ದಾರೆ. ಚೆನ್ನೈ ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರ ನಿಮಿತ್ತ ಆಗಮಿಸಿರುವ ನಾಗಾರ್ಜುನ ಅಕ್ಕಿನೇನಿ ಮತ್ತು ಹಿಂದಿ ಚಿತ್ರರಂಗದ ರಣ್ ಬೀರ್ ಕಪೂರ್ ಕೂಡಾ ರಾಜಮೌಳಿಗೆ ಜೊತೆ ನೀಡಿದ್ದಾರೆ. ದಕ್ಷಿಣ ಭಾರತೀಯರಿಗೆ ಬಾಳೆ ಎಲೆ ಊಟ ಅಂದರೆ ಬಹಳ ಅಚ್ಚುಮೆಚ್ಚು. ಸಾಮಾನ್ಯ ದಿನವೆ ಇರಲಿ […]
ಸೌತ್ ವುಡ್ ಸಿನಿಮಾಗಳ ಅಬ್ಬರಕ್ಕೆ ಬೆಚ್ಚಿದ ಬಾಲಿವುಡ್! ಬಾಯ್ ಕಾಟ್ ಬಾಲಿವುಡ್ ಟ್ರೆಂಡ್ ಗಳಿಂದ ಘಟಾನುಘಟಿ ನಟರ ಚಿತ್ರ ಮೂಲೆಗುಂಪು; ಕೋಟ್ಯಂತರ ರೂ ನಷ್ಟ!

ಮುಂಬೈ: ಅದೊಂದು ಕಾಲವಿತ್ತು, ಸಿನಿಮಾ ರಂಗ ಎಂದರೆ ಹಿಂದಿ ಭಾಷೆಗಳ ಚಿತ್ರ ನಿರ್ಮಾಣ ಮಾಡುವ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಬಾಲಿವುಡ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದ ಕಾಲವದು. ಬಾಲಿವುಡ್ಡಿನ ಏಕಚಕ್ರಾಧಿಪತ್ಯದಡಿ ಭಾರತೀಯ ಸಿನಿರಂಗದ ಅದೆಷ್ಟೋ ಭಾಷೆಗಳ ಉತ್ತಮ ಚಿತ್ರಗಳೂ ಮಸುಕಾಗಿರುತ್ತಿದ್ದವು. ಆದರೆ ಈಗ ಎಲ್ಲವೂ ತಲೆಕೆಳಗು. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಒಟ್ಟಾರೆಯಾಗಿ ಹೇಳುವುದಾದರೆ ಅಖಂಡ ದಕ್ಷಿಣ ಭಾರತದ ‘ಸೌತ್ ವುಡ್’ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಸಿನಿಮಾರಂಗದ ‘ಬಾದಶಹಾ’ ಎಂದು ಮೆರೆಯುತ್ತಿದ್ದ ಬಾಲಿವುಡ್ ಬೆಚ್ಚಿಬಿದ್ದಿದೆ. ಒಂದೆಡೆ ಪ್ರಖರ […]
ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ ಪ್ರಭಾಸ್ ನಟನೆಯ ಸಲಾರ್: ಕೆ.ಜಿ.ಎಫ್ ಕಮಾಲ್ ಗೆ ಮನಸೋತ ಜನ ಸಲಾರ್ ಗೂ ಜೈ ಎನ್ನುವರೆ?

ಭಾರತೀಯ ಚಿತ್ರರಂಗದ ಬಾಹುಬಲಿ, ದಕ್ಷಿಣದ ಖ್ಯಾತ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಸೆಪ್ಟೆಂಬರ್ 28 ರಂದು ತೆರೆಗಪ್ಪಳಿಸಲಿದೆ. ಕೆ.ಜಿ.ಎಫ್ ಖ್ಯಾತಿಯ ಪ್ರಖ್ಯಾತ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ, ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಬತ್ತಳಿಕೆಯಿಂದ ಹೊರಟಿರುವ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಬಗ್ಗೆ ಈಗಾಗಲೇ ಕುತೂಹಲ ಮತ್ತು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೆ.ಜಿ.ಎಫ್ ಕಮಾಲಿಗೆ ಮನಸೋತು ಕ್ರೇಜ್ ಹುಟ್ಟಿಸಿಕೊಂಡ ಸಿನಿಪ್ರಿಯರು ಸಲಾರ್ ಗೂ ಸೋಲುವರೆ? ಸಿನಿಮಾ ಗೆಲ್ಲಿಸುವರೆ ಎನ್ನುವುದನ್ನು ಕಾಲವೆ […]